newsics.com
ಕಲಬುರಗಿ: ಕಾಶ್ಮೀರದ ಪಹಲ್ಗಾಮ್ ಪ್ರದೇಶದ ಪ್ರವಾಸಿಗರ ಮೇಲೆ ಭಯೋತ್ಪಾದಕರ ಅಟ್ಟಹಾಸ ಮೆರೆದಿದ್ದು, 27 ಜನರು ಪ್ರಾಣವನ್ನು ತೆತ್ತಿದ್ದಾರೆ.
ಆದರೆ ಭಯೋತ್ಪಾದಕರ ಪೈಶಾಚಿಕ ಕೃತ್ಯದಿಂದ ಕಲಬುರಗಿಯ ಹಿರಿಯ ವಕೀಲರೊಬ್ಬರ ಕುಟುಂಬದ 8 ಜನ ಎಸ್ಕೇಪ್ ಆಗಿದ್ದಾರೆ. ಎಲ್ಲರೂ ದಾಳಿ ನಡೆಯುವ ಮೊದಲೇ ಬೇರೆ ನಗರಕ್ಕೆ ತೆರಳಿದ್ದರಿಂದ ಪ್ರಾಣ ಉಳಿದಿದೆ.
ಮಲ್ಲಿಕಾರ್ಜುನ ಭೃಂಗಿಮಠ ಕುಟುಂಬದವರು ಏಪ್ರಿಲ್ 16 ರಂದು ಕಲಬುರಗಿಯಿಂದ ಜಮ್ಮುಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದಾರೆ. ಪಹಲ್ಗಾಮ್ನಲ್ಲಿ ಏಪ್ರಿಲ್ 20, 21 ರಂದು ಆರು ವ್ಯಾಲಿ, ಬೇತಾಬ ವ್ಯಾಲಿಯನ್ನು ನೋಡಿಕೊಂಡು ಅದೇ ರಾತ್ರಿ ಮಲ್ಲಿಕಾರ್ಜುನ ಭೃಂಗಿಮಠ ಹಾಗೂ ಅವರ ಕುಟುಂಬದವರು ಶ್ರೀನಗರಕ್ಕೆ ತೆರಳಿದ್ದಾರೆ. ಇದರಿಂದ ದೊಡ್ಡ ಅನಾಹುತದಿಂದ ಎಲ್ಲರೂ ಕೊಂಚದರಲ್ಲೇ ಸೇಫ್ ಆಗಿದ್ದಾರೆ. ಶ್ರೀನಗರದಲ್ಲಿರುವ ಮಲ್ಲಿಕಾರ್ಜುನ ಭೃಂಗಿಮಠ ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಮಾಹಿತಿ ನೀಡಿದ್ದಾರೆ.
ಕೆಲವೇ ಗಂಟೆಗಳ ಮೊದಲು ಮಲ್ಲಿಕಾರ್ಜುನ ಭೃಂಗಿಮಠ ಕುಟುಂಬದವರು ಉಗ್ರರ ದಾಳಿ ನಡೆಸಿದ ಸ್ಥಳದ ಸಮೀಪದಲ್ಲೇ ಸುತ್ತಾಡಿದ್ದರು. ಅದೇ ರಾತ್ರಿ ಪಹಲ್ಗಾಮ್ನಿಂದ ಶ್ರೀನಗರಕ್ಕೆ ತೆರಳಿದ್ದರಿಂದ ಇಡೀ ಕುಟುಂಬ ಸೇಫ್ ಆಗಿ ಇದೆ.