newsics.com
ದೆಹಲಿ: ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸತ್ತಿಲ್ಲ, ಬದುಕಿದ್ದಾನೆ ಆರೋಗ್ಯವಾಗಿದ್ದಾನೆ ಎನ್ನುವ ಹೇಳಿಕೆ ಕೈಲಾಸದಿಂದ ಬಂದಿದೆ. ಕೈಲಾಸ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದೆ.
ನಿತ್ಯಾನಂದ ಸ್ವಾಮಿ ಆರೋಗ್ಯವಾಗಿದ್ದಾರೆ. ಇಷ್ಟೇ ಅಲ್ಲ ಸಕ್ರೀಯವಾಗಿ ಯುಗಾದಿ ಹಬ್ಬದಲ್ಲೂ ಪಾಲ್ಗೊಂಡಿದ್ದಾರೆ. ಸುಳ್ಳು ಸುದ್ದಿಗಳ ಮೂಲಕ ಹಿಂದೂ ಸರ್ವೋಚ್ಚ ಪೀಠಾಧಿಪತಿಗೆ ಅವಮಾನ ಮಾಡಲಾಗುತ್ತಿದೆ. ಇದನ್ನು ಸಹಿಸಲ್ಲ ಎಂದು ಬರೆದು ಸ್ಪಷ್ಟನೆ ನೀಡಿದೆ.
ಈ ಸ್ಪಷ್ಟನೆ ಅನುಮಾನವನ್ನು ಹೆಚ್ಚಿಸಿದೆ. ನಿತ್ಯಾನಂದನ ಅಧಿಕೃತ ಕೈಲಾಸ ಪೇಜ್ ಮೂಲಕ ಈ ಸ್ಪಷ್ಟನೆ ನೀಡಲಾಗಿದೆ. ಆದರೆ ಸ್ಪಷ್ಟನೆ ವೇಳೆ ಬಳಸಿರುವ ಫೋಟೋ 15 ವರ್ಷ ಹಳೆಯ ಪೋಟೋ ಆಗಿದೆ. ಹೀಗಾಗಿ ಅವರು ನಿಜವಾಗಿಯೂ ಆರೋಗ್ಯವಾಗಿದ್ದರೆ ಇತ್ತೀಚಿನ ಫೋಟೋವನ್ನು ಬಳಸಬೇಕಿತ್ತು. ಇಷ್ಟು ಹಳೆಯ ಫೋಟೋವನ್ನು ಏಕೆ ಬಳಸಲಾಗಿದೆ ಎಂಬುದು ಅನುಮಾನ ಹುಟ್ಟುಹಾಕಿದೆ.
Congress Government: ದೆಹಲಿಯತ್ತ ಸಿಎಂ, ಡಿಸಿಎಂ ಪಯಣ: ಸಂಪುಟ ಪುನಾರಚನೆ ಚರ್ಚೆ?