newsics.com
ರಾಯ್ಪುರ: ಮಹಾದೇವ್ ಬೆಟ್ಟಿಂಗ್ ಆಯಪ್ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ CBI ದಾಳಿ ನಡೆಸಿದೆ.
ಬಘೇಲ್ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸಭೆಗೆ ಹಾಜರಾಗುವ ಮೊದಲು ಕೇಂದ್ರ ತನಿಖಾ ತಂಡದ ಅಧಿಕಾರಿಗಳು ರಾಯ್ಪುರ ಮತ್ತು ಭಿಲಾಯಿಯ ನಿವಾಸ ಮತ್ತು ಕಚೇರಿ ತಲುಪಿದ್ದಾರೆ ಎಂದು ಅವರ ಕಚೇರಿ ಟ್ವೀಟ್ನಲ್ಲಿ ತಿಳಿಸಿದೆ.
ಸಿಬಿಐ ಬಂದಿದೆ. ಏಪ್ರಿಲ್ 8 ಮತ್ತು 9 ರಂದು ಅಹಮದಾಬಾದ್ ನಲ್ಲಿ ನಡೆಯಲಿರುವ ಎಐಸಿಸಿ ಸಭೆಗಾಗಿ ರಚಿಸಲಾದ ಕರಡು ಸಮಿತಿಯ ಸಭೆಗಾಗಿ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇಂದು ದೆಹಲಿಗೆ ಹೋಗಲಿದ್ದಾರೆ. ಅದಕ್ಕೂ ಮುಂಚೆಯೇ, ಸಿಬಿಐ ರಾಯ್ಪುರ ಮತ್ತು ಭಿಲಾಯಿ ನಿವಾಸವನ್ನು ತಲುಪಿದೆ,” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ನ ತನಿಖೆಯ ಭಾಗವಾಗಿ ಇದುವರೆಗೆ ಜಾರಿ ನಿರ್ದೇಶನಾಲಯ (ED) 2,295 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದೆ.
ರೈಲು ಬರುತ್ತಿದ್ದಂತೆ ಹಳಿ ಮೇಲೆ ಮಲಗಿ ಐಬಿ ಅಧಿಕಾರಿ ದುರಂತ ಸಾವು: ಆಗಿದ್ದೇನು?