newsics.com
ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ದೂರವಾಗಿದ್ದಾರೆ ಎನ್ನುವ ಸುದ್ದಿ ಇತ್ತು. ಈ ಜೋಡಿ ಮಾರ್ಚ್ 20ರಂದು ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನವನ್ನು ಪಡೆದುಕೊಂಡು ದೂರವಾಗಿದ್ದಾರೆ.ಆದರೆ ಈ ತಾರಾ ಜೋಡಿಯ ವಿಚ್ಛೇದನಕ್ಕೆ ಕಾರಣವೇನು ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ. ಆದರೀಗ ಇಬ್ಬರು ದೂರವಾಗಲು ಅಸಲಿ ಕಾರಣವೇನು ಎಂಬುದು ಹೊರಬಿದ್ದಿದೆ.
ಪತ್ರಕರ್ತ ವಿಕ್ಕಿ ಲಾಲ್ವಾನಿ ಅವರ ಮಾಹಿತಿ ಪ್ರಕಾರ, ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅವರ ಸಂಬಂಧದಲ್ಲಿ ಬಿರುಕು ಮೂಡಲು ಮುಖ್ಯ ಕಾರಂ ವಾಸ ಸ್ಥಳದಲ್ಲಿನ ಭಿನ್ನಾಭಿಪ್ರಾಯ. ಇಬ್ಬರೂ ತಮ್ಮ ವಾಸಸ್ಥಳದ ಬಗ್ಗೆ ಒಮ್ಮತಕ್ಕೆ ಬಂದಿರಲಿಲ್ಲ. ಈ ಕಾರಣದಿಂದಾಗಿ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದರು.
ಡಿಸೆಂಬರ್ 2020 ರಲ್ಲಿ ಮದುವೆಯಾದ ನಂತರ, ಧನಶ್ರೀ ಹರಿಯಾಣದಲ್ಲಿ ಚಹಲ್ ಮತ್ತು ಅವರ ಪೋಷಕರೊಂದಿಗೆ ವಾಸಿಸಲು ತೆರಳಿದ್ದರು. ಆದರೆ, ಕೆಲವು ದಿನಗಳ ನಂತರ ಧನಶ್ರೀ ಮುಂಬೈನಲ್ಲಿ ಉಳಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂಬೈನಲ್ಲೇ ಮನೆ ಮಾಡಬೇಕೆಂದು ಅಗ್ರಹಿಸಿದ್ದರು. ಆದರೆ ಇದು ಯುಜ್ವೇಂದ್ರ ಚಹಲ್ ಅವರಿಗೆ ಇಷ್ಟವಿರಲಿಲ್ಲ.
ಧನಶ್ರೀ ವರ್ಮಾ ಮುಂಬೈನಲ್ಲೇ ವಾಸಿಸಲು ಬಯಸುತ್ತಿದ್ದರು. ಆದರೆ ಯುಜ್ವೇಂದ್ರ ಚಹಲ್ ತನ್ನ ಪತ್ನಿಯು ಹರಿಯಾಣದಲ್ಲಿರುವ ತಾಯಿಯೊಂದಿಗೆ ಇರಬೇಕೆಂದು ಆಗ್ರಹಿಸಿದ್ದರು. ಆದರೆ ಇದಕ್ಕೆ ಧನಶ್ರೀ ವರ್ಮಾ ಸಿದ್ಧರಿರಲಿಲ್ಲ ಎಂದು ಹೇಳಲಾಗಿದೆ.
ಇತ್ತ ತನ್ನ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಯುಜ್ವೇಂದ್ರ ಚಹಲ್ ಸಹ ಸಿದ್ಧನಾಗಿರಲಿಲ್ಲ. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿದೆ. ಈ ಭಿನ್ರಾಭಿಪ್ರಾಯವೇ ಡೈವೋರ್ಸ್ ಹಂತಕ್ಕೆ ಹೋಗಿದೆ ಎಂದು ವಿಕ್ಕಿ ಲಾಲ್ವಾನಿ ಹೇಳಿಕೊಂಡಿದ್ದಾರೆ.
Aghori ಮನೆ ಬಿಟ್ಟು ಹೋದ ಬಿ.ಟೆಕ್ ವಿದ್ಯಾರ್ಥಿನಿ ಇದೀಗ ಅಘೋರಿ: ಮಗಳಿಗಾಗಿ ಹೆತ್ತವರ ಕಣ್ಣೀರು