ಶಿರಸಿ: ಈ ಮದುವೆ ಆಮಂತ್ರಣ ಪತ್ರಿಕೆಗಳು ನೋಡೋಕೆ ಒಂದಕ್ಕಿಂತ ಒಂದು ಚಂದ, ಒಂದೊಂದು ವಿನ್ಯಾಸ, ಒಂದೊಂದು ಶೈಲಿ ಅಂತ ಇರುತ್ತೆ. ಆದ್ರೆ ಇಲ್ಲೊಂದು ಮದುವೆ ಆಮಂತ್ರಣ ಪತ್ರಿಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಏನು ಅಂತೀರಾ?
ಹೌದು, ಶಿರಸಿ ತಾಲೂಕಿನ ಹೊನ್ನೆಗದ್ದೆಯ ಮಹಾಲಕ್ಷ್ಮೀ ಸತ್ಯನಾರಾಯಣ ಹೆಗಡೆ ಇವರ ಮಗ ಖ್ಯಾತ ಪಶುವೈದ್ಯ ಪರಮೇಶ್ವರ ಎಸ್.ಹೆಗಡೆ (ಡಾ. ಪಿ.ಎಸ್.ಹೆಗಡೆ) ಇವರ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಭಿನ್ನ ರೀತಿಯಲ್ಲಿ ಮಾಡಿದ್ದಾರೆ.
ಡಾ.ಪಿ.ಎಸ್.ಹೆಗಡೆ. ಮನೆಯಲ್ಲಿ ಸಾಮಾನ್ಯವಾಗಿ ಊಟಕ್ಕೆ ಬಳಸುವ ಸ್ಟೀಲ್ ಬಟ್ಟಲಿನ ಹಿಂಭಾಗದಲ್ಲಿ ಡಿಜಿಟಲ್ ಪ್ರಿಂಟ್ ಮೂಲಕ ತಮ್ಮ ಮಗಳ ಮದುವೆಯ ಕರೆಯೋಲೆಯನ್ನು ಮುದ್ರಿಸಿ ಮದುವೆಗೆ ಆಮಂತ್ರಿಸಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪರಿಸರಕ್ಕೆ ಪೂರಕವಾಗಿ, ಪ್ರತಿದಿನದ ಬಳಕೆಗೆ ಅನುಕೂಲವಾಗುವಂತೆ ಸ್ಟೀಲ್ ಬಟ್ಟಲಿನಲ್ಲಿ ಆಮಂತ್ರಣ ಮುದ್ರಿಸಿದ್ದು ಗಮನಾರ್ಹವಾಗಿದ್ದು, ಜೊತೆಗೆ ಪರಿಸರಕ್ಕೆ ಹಾನಿಯಾಗದಂತೆ ಪೂರಕವಾಗಿ ಮೂಡಿಬಂದಿದ್ದು ವಿಶೇಷವಾಗಿದೆ.