newsics.com
ಬೆಂಗಳೂರು : ಜೀ ಕನ್ನಡದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅವಾರ್ಡ್ ಸ್ವೀಕರಿಸಿದ ಸಾಧು ಕೋಕಿಲ ಅವರು ಉಪೇಂದ್ರ ಅವರನ್ನು ನೆನಪಿಸಿಕೊಂಡರು.
ಜೀ ಎಂಟರ್ಟೇನರ್ಸ್ ಕಾಮಿಡಿ ಅವಾರ್ಡ್ಸ್ 2025’ನಲ್ಲಿ ‘ಹಾಸ್ಯ ಚಕ್ರವರ್ತಿ ನರಸಿಂಹರಾಜು ಪ್ರಶಸ್ತಿ’ ಸಾಧು ಕೋಕಿಲ ಅವರಿಗೆ ಸಿಕ್ಕಿದೆ. ಇದನ್ನು ಉಮೇಶ್ ಅವರು ಸಾಧು ಕೋಕಿಲಾಗೆ ನೀಡಿದರು. ಈ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಸಾಧು ಕೋಕಿಲ ಅವರು, ‘ನಾನಾಗಿರಬಹುದು, ಮನೋಹರ್ ಆಗಿರಬಹುದು, ಗುರು ಕಿರಣ್ ಆಗಿರಬಹುದು, ನಮ್ಮಲ್ಲಿದ್ದ ಟ್ಯಾಲೆಂಟ್ ತೆಗೆದಿದ್ದು ಅವರೇ’ ಎಂದು ಸಾಧು ಕೋಕಿಲ ಹೇಳಿದರು.
ಮ್ಯೂಸಿಕ್ ಡೈರೆಕ್ಟರ್ ಮಾಡಿದ್ದು ಅವರೇ, ಹಾಸ್ಯ ನಟನಾಗಿ ಮಾಡಿದ್ದೂ ಅವರೇ, ಡೈರೆಕ್ಷನ್ ಮಾಡ್ಸಿದ್ದೂ ಅವರೇ. ಉಪೇಂದ್ರ ಇಲ್ಲ ಅಂದ್ರೆ ನಾನು ಇಲ್ಲ’ ಎಂದು ಹೆಮ್ಮೆಯಿಂದ ಸಾಧು ಕೋಕಿಲ ಅವರು ಹೇಳಿಕೊಂಡರು.
https://www.instagram.com/reel/DFrsKPpP0mZ/?igsh=YWtyeXc5Ymk5cDNu