newsics.com
ಕೇರಳ: ಅಂಗನವಾಡಿಯಲ್ಲಿ ಉಪ್ಪಿಟ್ಟು, ರೈಸ್ ಕೊಡುವ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ವೈರಲ್ ಆಗಿದೆ.
ಹೌದು, ಮನೆಯಲ್ಲಿ ಬಿರಿಯಾನಿ ತಿನ್ನುತ್ತಿದ್ದಾಗ ಇಟ್ಟ ಈ ಬೇಡಿಕೆಯನ್ನು ತಾಯಿ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಬೇಗನೆ ಗಮನ ಸೆಳೆದಿದ್ದು, ಕೇರಳದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಅವರ ಗಮನಕ್ಕೂ ಬಂದಿದೆ. ಶಂಕು ಸಲಹೆಯಂತೆ ಅಂಗನವಾಡಿ ಮೆನುವನ್ನು ಪರಿಷ್ಕರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ವೀಣಾ ಜಾರ್ಜ್ ಅವರು ವಿಡಿಯೋವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದು, ಮಗುವಿನ ಮುಗ್ಧ ವಿನಂತಿಯನ್ನು ಪರಿಗಣಿಸಲಾಗುವುದು ಎಂದು ಉಲ್ಲೇಖಿಸಿದ್ದಾರೆ.
ಥ್ರಾಜುಲ್ ಎಸ್ ಶಂಕರ್ ಎಂಬ ಬಾಲಕ, ಶಂಕು ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.
ವೈರಲ್ ವಿಡಿಯೋದಲ್ಲಿ, ಶಂಕು ಟೋಪಿ ಧರಿಸಿ, “ನನಗೆ ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ, ‘ಬಿರ್ನಾನಿ’ (ಬಿರಿಯಾನಿ) ಮತ್ತು ‘ಪೋರಿಚಾ ಕೋಳಿ’ (ಚಿಕನ್ ಫ್ರೈ) ಬೇಕು” ಎಂದು ಹೇಳುತ್ತಾನೆ.
ಕೇರಳದಲ್ಲಿ ಸುಮಾರು 33,000 ಅಂಗನವಾಡಿಗಳಿವೆ ಮತ್ತು 2022 ರಲ್ಲಿ, ಸರ್ಕಾರ ಹಾಲು ಮತ್ತು ಮೊಟ್ಟೆ ಯೋಜನೆಯನ್ನು ಪರಿಚಯಿಸಿದೆ.
https://www.instagram.com/reel/DFZUEmICEqv/?igsh=ZjBlcnhxd3g1MnM5