newsics.com
ತೆಲುಗು ಚಿತ್ರ ನಿರ್ಮಾಪಕ ಕೆ.ಪಿ. ಚೌಧರಿ, ಅಲಿಯಾಸ್ ಸುಂಕರ ಕೃಷ್ಣ ಪ್ರಸಾದ್ ಚೌಧರಿ, ಫೆಬ್ರವರಿ 3 ರಂದು ಗೋವಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ವೈಯಕ್ತಿಕ ಮತ್ತು ವೃತ್ತಿಪರ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ, ಇದರಲ್ಲಿ ಆರ್ಥಿಕ ತೊಂದರೆಗಳೂ ಸೇರಿದ್ದವು.
ಈ ನಿರ್ಧಾರಕ್ಕೆ ನಿರ್ದಿಷ್ಟ ಕಾರಣ ತಿಳಿದಿಲ್ಲವಾದರೂ, ಕೆ.ಪಿ. ಚೌಧರಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಎಂದು ಹೇಳಲಾಗಿದೆ. ತಮಿಳಿನ ಹಿಟ್ “ಕಬಾಲಿ” ಚಿತ್ರವನ್ನು ತೆಲುಗು ಪ್ರೇಕ್ಷಕರಿಗೆ ತಂದ ಕೀರ್ತಿ ಚೌಧರಿಗೆ ಸಲ್ಲುತ್ತದೆ.
ಹೌದು,ರಜನಿಕಾಂತ್ ನಟನೆಯ ‘ಕಬಾಲಿ’ ಸಿನಿಮಾವನ್ನು ಚೌಧರಿ ಅವರು ತೆಲುಗು ವರ್ಷನ್ ಅಲ್ಲಿ ಬಿಡುಗಡೆ ಮಾಡಿದ್ದರು. ಭಾರೀ ಮೊತ್ತದ ಹಣ ನೀಡಿ ಅವರು ವಿತರಣೆ ಹಕ್ಕುಗಳನ್ನು ಖರೀದಿಸಿದ್ದರು. ಆ ಸಂದರ್ಭ ಭಾರೀ ಸುದ್ದಿಯಾಗಿದ್ದರು.
ಟಾಲಿವುಡ್ನ ಡ್ರಗ್ಸ್ ಜಾಲದ ಜೊತೆಗೂ ಚೌಧರಿ ನಂಟು ಹೊಂದಿದ್ದರು. ಈ ಪ್ರಕರಣದಲ್ಲಿ ಅವರನ್ನು 2023ರಲ್ಲಿ ಬಂಧಿಸಲಾಗಿತ್ತು. ಅವರು ತೆಲುಗು ಮತ್ತು ತಮಿಳು ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡಿದ್ದರು ಎಂಬುದು ತನಿಖೆ ಮೂಲಕ ಬೆಳಕಿಗೆ ಬಂದಿತ್ತು.
ಈ ಹೈ-ಪ್ರೊಫೈಲ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ನಿರ್ಮಾಪಕ ತೀವ್ರವಾಗಿ ನೊಂದಿದ್ದರು ಎಂದು ಮೂಲಗಳು ತಿಳಿಸಿವೆ.