newsics.com
ಬೆಂಗಳೂರು: ಮಕರ ಸಂಕ್ರಾಂತಿಯದಂದು ಇಂದು (ಜನವರಿ 14) ಸಂಜೆ 5:14 ರಿಂದ 5:17ರ ವರೆಗೆ ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಆದ್ರೆ ಇಂದು ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಆಗಿಲ್ಲ.
ಮೋಡ ಕವಿದ ವಾತಾವರಣದಿಂದ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಸಾಧ್ಯವಾಗಲಿಲ್ಲ. ಈ ರೀತಿ ಆಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಎರಡೂ ಬಾರಿ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿರಲಿಲ್ಲ.
ಇತಿಹಾಸದಲ್ಲೇ 3ನೇ ಬಾರಿಗೆ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬಿದ್ದಿಲ್ಲ. ಹೀಗಾಗಿ ಸಹಜವಾಗಿ ಭಕ್ತರಿಗೆ ನಿರಾಸೆಯಾಗಿದ್ದು, ಮುಂದೆ ಏನಾದರೂ ಗಂಡಾಂತರ ಕಾದಿದ್ಯಾ ಎನ್ನುವ ಚರ್ಚೆಗಳು ಸಹ ನಡೆದಿವೆ.
ಅರ್ಚಕ ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ಗಂಗಾಂಧರೇಶ್ವರ ಸ್ವಾಮಿಗೆ ಸೂರ್ಯ ಪೂಜೆಯಾಗಿದೆ. ಆದ್ರೆ ಪ್ರಕೃತಿ ಕಾರಣದಿಂದ ನಮಗೆ ಗೋಚರವಾಗಿಲ್ಲ. ಆದ್ರೆ ಗಂಗಾಂಧರಸ್ವಾಮೀ ಎಲ್ಲರಿಗೂ ದರ್ಶನ ನೀಡುತ್ತಾನೆ. ಖಂಡಿತವಾಗಲೂ ಸೂರ್ಯ ರಶ್ಮಿ ಶಿವಲಿಂಗಕ್ಕೆ ಸ್ಪರ್ಶಿಸಿದೆ. ಎಷ್ಟು ನಿಮಿಷಗಳ ಕಾಲ ಸೂರ್ಯ ರಶ್ಮಿ ಸ್ಪರ್ಶಿಸಿದೆ ಎಂದು ಗೊತ್ತಾಗಿಲ್ಲ. ಮೋಡ ಕವಿದ ವಾತಾವಾರಣ ಹಿನ್ನೆಲೆಯಲ್ಲಿ ಸೂರ್ಯ ರಶ್ಮಿ ಕಂಡುಬಂದಿಲ್ಲ. ಪ್ರಸಕ್ತ ವರ್ಷ ಜನರಿಗೆ ಯಾವುದೇ ರೀತಿಯ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದರು