newsics.com
ಸಿದ್ದಾಪುರ(ಉತ್ತರ ಕನ್ನಡ): ಪಿಗ್ಮಿ ಸಂಗ್ರಹಿಸುತ್ತಿದ್ದ ಒಂಟಿ ಮಹಿಳೆಯ ಮನೆಯ ಹೆಂಚು ತೆಗೆದು ಒಳನುಗ್ಗಿದ ದುಷ್ಕರ್ಮಿಗಳು, ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಪಿಗ್ಮಿ ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ಪಟ್ಟಣದ ಸೊರಬ ರಸ್ತೆಯ ಬಸವನಗಲ್ಲಿಯಲ್ಲಿ ನಡೆದಿದೆ.
ಗೀತಾ ಪ್ರಭಾಕರ್ ಹುಂಡೇಕರ್(72) ಹತ್ಯೆಯಾದ ಮಹಿಳೆ. ಮೃತ ಗೀತಾ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ನಿತ್ಯವೂ ಐದರಿಂದ ಹತ್ತು ಸಾವಿರದವರೆಗೆ ಪಿಗ್ಮಿ ಹಣ ಸಂಗ್ರಹಿಸುತ್ತಿದ್ದು, ಪಿಗ್ಮಿ ಕಲೆಕ್ಟ್ ಮಾಡಿದ ಹಣವನ್ನ ಮರುದಿನ ಬ್ಯಾಂಕ್ಗೆ ಜಮೆ ಮಾಡುತ್ತಿದ್ದರು. ಮಹಿಳೆಯ ಬಳಿ ಹಣ ಇರುವುದನ್ನ ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಮಹಿಳೆಯ ಬಚ್ಚಲ ಮನೆಯ ಹೆಂಚು ತೆಗೆದು ಒಳನುಗ್ಗಿ, ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಆಕೆಯ ಬಳಿಯಿಂದ ಹಣವನ್ನು ಕದ್ದು ಪರಾರಿಯಾಗಿದ್ದಾರೆ.
ಈ ಬಗ್ಗೆ ಮೃತ ಮಹಿಳೆಯ ಅಳಿಯ ರಾಘವೇಂದ್ರ ನಾಯ್ಕ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Death of four soldiers ಪ್ರತ್ಯೇಕ ಅಪಘಾತ: ಒಂದೇ ದಿನ ಕರ್ನಾಟಕ ಮೂಲದ ನಾಲ್ವರು ಯೋಧರ ಸಾವು