newsics.com
ಹುಬ್ಬಳ್ಳಿ : ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಸಿಲಿಂಡರ್ ಸ್ಫೋಟಗೊಂಡು ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದಾರೆ. ಕೆಲ ಭಕ್ತರ ಸ್ಥಿತಿ ಚಿಂತಾಜನಕವಾಗಿದೆ.
ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಸಿಲಿಂಡರ್ ಬ್ಲಾಸ್ಟ್ ಆಗಿ ವ್ರತಾಚರಣೆಯಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ಗಾಯವಾಗಿದೆ. ಹುಬ್ಬಳ್ಳಿಯ ಉಣಕಲ್ನ ಈಶ್ವರ ದೇಗುಲ ಬಳಿ ಘಟನೆ ಸಂಭವಿಸಿದ್ದು 14 ಮಾಲಾಧಾರಿಗಳ ಪೈಕಿ 9 ಮಾಲಾಧಾರಿಗಳಿಗೆ ಗಾಯವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳು
ತೇಜಸ್ವರ ಸಾತರೆ (26 ವರ್ಷ) ಗಾಯಗೊಂಡ ಪ್ರಮಾಣ 74%.
ಶಂಕರ ಚವ್ಹಾಣ ( 29 ವರ್ಷ) ಗಾಯಗೊಂಡ ಪ್ರಮಾಣ 99%.
ಪ್ರವೀಣ ಬೀರನೂರ (24 ವರ್ಷ) ಗಾಯಗೊಂಡ ಪ್ರಮಾಣ 86%
ಮಂಜುನಾಥ ವಾಗ್ಮೋಡೆ (22 ವರ್ಷ) ಗಾಯಗೊಂಡ ಪ್ರಮಾಣ 70%
ನಿಜಲಿಂಗಪ್ಪ ಬೇಪುರಿ ( 58 ವರ್ಷ) ಗಾಯಗೊಂಡ ಪ್ರಮಾಣ 86%
ರಾಜು ಮೂಗೇರಿ (21 ವರ್ಷ) ಗಾಯಗೊಂಡ ಪ್ರಮಾಣ 74%
ಸಂಜಯ ಸವದತ್ತಿ ( 20 ವರ್ಷ) ಗಾಯಗೊಂಡ ಪ್ರಮಾಣ 80%
ವಿನಾಯಕ ಭಾರಕೇರ (12 ವರ್ಷ) ಗಾಯಗೊಂಡ ಪ್ರಮಾಣ 25%
ಪ್ರಕಾಶ ಬಾರಕೇರ ( 42 ವರ್ಷ) ಗಾಯಗೊಂಡ ಪ್ರಮಾಣ 91%