newsics.com
ಹಾವೇರಿ: ಮಗನ ಸಾವಿನ ಸುದ್ದಿ ಕೇಳಿ ತಂದೆಯೂ ಮೃತಪಟ್ಟ ಧಾರುಣ ಘಟನೆ ನಡೆದಿದೆ.
ಇಲ್ಲಿನ ಮಂಜುನಾಥ ನಗರ ನಿವಾಸಿಗಳಾದ ಡಾ.ವಿನಯ ಗುಂಡಗಾವಿ ಹಾಗೂ ಡಾ.ವೀರಭದ್ರಪ್ಪ ಗುಂಡಗಾವಿ ಮೃತಪಟ್ಟವರು.
ಡಾ.ವಿನಯ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ವಿಷಯ ಕೇಳಿ ತಂದೆ ಜಿಲ್ಲಾಸ್ಪತ್ರೆ ನಿವೃತ್ತ ವೈದ್ಯ, ಡಾ.ವಿನಯ ತಂದೆ ಡಾ.ವೀರಭದ್ರಪ್ಪ ಗುಂಡಗಾವಿ ಅವರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಪ್ಪ- ಮಗನ ಸಾವು ಕಂಡು ಸ್ಥಳೀಯರು ಮಮ್ಮಲ ಮರುಗಿದರು.