newsics.com
ಚೆನ್ನೈ: ಒಡಿಶಾದಲ್ಲಿ ನಡೆದ ಅಪಘಾತದಂತೆ ಮತ್ತೊಂದು ರೈಲು ಅಪಘಾತ ತಮಿಳುನಾಡಿನಲ್ಲಿ ನಡೆದಿದೆ. ಮೈಸೂರಿನಿಂದ ಬಿಹಾರದ ದರ್ಬಾಂಗ್ಗೆ ಹೊರಟಿದ್ದ ಬಾಗಮತಿ ಎಕ್ಸ್ಪ್ರೆಸ್ ರೈಲು ಲೂಪ್ ಲೈನಿಗೆ ಪ್ರವೇಶ ಪಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.
ಮೈಸೂರಿನಿಂದ ದರ್ಬಾಂಗ್ಗೆ ತೆರಳುತ್ತಿದ್ದ ಬಾಗಮತಿ ಎಕ್ಸ್ಪ್ರೆಸ್ ರಾತ್ರಿ ಪೊನ್ನೇರಿ ರೈಲು ನಿಲ್ದಾಣ ದಾಟಿತ್ತು. ಈ ವೇಳೆ ಮುಂದಿನ ನಿಲ್ದಾಣ ಕವರಪೆಟ್ಟೈಗೆ ತೆರಳಲು ಗ್ರೀನ್ ಸಿಗ್ನಲ್ ಸಿಕ್ಕಿತ್ತು. ರಾತ್ರಿ 8:30ರ ವೇಳೆ ನಿಲ್ದಾಣ ಪ್ರವೇಶಿಸುವಾಗ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಈ ರೈಲು ಕವರಪೆಟ್ಟೈ ನಿಲ್ದಾಣದ ನಂತರ ಗುಡೂರಿನ ಕಡೆಗೆ ಹೋಗಬೇಕಿತ್ತು. ಇದು ಎಕ್ಸ್ಪ್ರೆಸ್ ರೈಲಾಗಿದ್ದ ಕಾರಣ ಕವರಪೆಟ್ಟೈ ನಿಲ್ದಾಣದಲ್ಲಿ ನಿಲುಗಡೆ ಇರಲಿಲ್ಲ. ಚೆನ್ನೈನಿಂದ ಈ ರೈಲಿಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಚಾಲಕ ಸಿಗ್ನಲ್ಗಳನ್ನು ಸರಿಯಾಗಿ ಅನುಸರಿಸಿದ್ದಾನೆ. ಇಲ್ಲಿ ರೈಲು ಮೇನ್ ಲೈನ್ನಲ್ಲಿ ಸಾಗಬೇಕಿತ್ತು.ಆದರೆ ಲೂಪ್ ಲೈನ್ಗೆ ರೈಲು ಪ್ರವೇಶ ಮಾಡಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಬೋಗಿಗಳು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಗಂಟೆಗೆ 100 ಕಿ.ಮೀ ವೇಗದಲ್ಲಿ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದ್ದ ಕಾರಣ 13 ಬೋಗಿಗಳು ಹಳಿ ತಪ್ಪಿವೆ.