newsics.com
ಬೆಂಗಳೂರು: ಊರಿಗೆ ತೆರಳಿ ಕುಟುಂಬ, ಬಂಧು ಬಾಂಧವರೊಂದಿಗೆ ಗೌರಿ ಗಣೇಶ ಹಬ್ಬ ಆಚರಿಸಬೇಕೆಂದುಕೊಂಡವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಸಿಹಿ ಸುದ್ದಿ ನೀಡಿದೆ.
ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಿಂದ 7ರವರೆಗೆ ಬೆಂಗಳೂರಿನಿಂದ 1,500ಕ್ಕೂ ಹೆಚ್ಚು ವಿಶೇಷ ಬಸ್ಗಳನ್ನು ಓಡಿಸಲು ಮುಂದಾಗಿದೆ. ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ. ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳೂ ಇರಲಿವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಗೌರಿ ಹಬ್ಬ, ಗಣೇಶ ಚತುರ್ಥಿಗೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಳವಾಗುವುದರಿಂದ ವಿಶೇಷ ಬಸ್ಗಳನ್ನು ಓಡಿಸಲಾಗುವುದು ಎಂದು ಕೆಎಸ್ಆರ್ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳು ಸಂಚರಿಸಲಿವೆ.
ಮಂಗಳೂರು, ಧಾರವಾಡ, ಶಿವಮೊಗ್ಗ, ಬೆಳಗಾವಿ, ಮಡಿಕೇರಿ, ವಿಜಯಪುರ, ಗೋಕರ್ಣ, ಕಲಬುರಗಿ, ಧರ್ಮಸ್ಥಳ, ರಾಯಚೂರು, ಶೃಂಗೇರಿ, ಬಳ್ಳಾರಿ, ಹೊರನಾಡು, ಹುಬ್ಬಳ್ಳಿ, ಕುಕ್ಕೆ ಸುಬ್ರಹ್ಮಣ್ಯ, ದಾವಣಗೆರೆ, ಕೊಲ್ಲೂರು, ಕಾರವಾರ, ಹೊಸಪೇಟೆ ಸಹಿತ ಪ್ರಮುಖ ಸ್ಥಳಗಳಿಗೆ ಈ ಬಸ್ ಸೇವೆ ಲಭ್ಯವಿದೆ.
ಅಲ್ಲದೆ, ಎರ್ನಾಕುಲಂ, ಚೆನ್ನೈ, ಹೈದರಾಬಾದ್, ಊಟಿ, ಪುಣೆ, ಕೊಡೈಕೆನಾಲ್, ಶಿರಡಿ, ಸೇಲಂ, ತಿರುಚಿನಾಪಳ್ಳಿ, ಪಣಜಿ, ಪುದುಕೋಟೆ, ಮಧುರೈ, ಪಾಲ್ಘಾಟ್ಗಳಿಗೂ ಬಸ್ಗಳು ಸಂಚರಿಸಲಿವೆ.
2023 ರ ವಿಧಾನಸಭೆ ಚುನಾವಣೆ: ಕುಣಿಗಲ್ ಶಾಸಕ ರಂಗನಾಥ್ ಆಯ್ಕೆ ಅಸಿಂಧು ಕೋರಿ ಸುಪ್ರೀಂಗೆ ಬಿಜೆಪಿ ಅರ್ಜಿ,ನೋಟಿಸ್ ಜಾರಿ