newsics.com
ವಾರಾಣಸಿ: ತನ್ನ ಪ್ರಿಯಕರ ಬೇರೊಬ್ಬನ ಜೊತೆ ಮದುವೆಯಾಗಿದ್ದಕ್ಕೆ ಕೋಪಗೊಂಡ ಯುವತಿ ಮದುವೆ ಮುಗಿಸಿ ಮನೆಗೆ ಬಂದ ವಧುವಿನ ಕೋಣೆಗೆ ನುಗ್ಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಾರಾಣಸಿಯ ಚೋಲಾಪುರ ಪ್ರದೇಶದಲ್ಲಿ ನಡೆದಿದೆ.
ಈ ವೇಳೆ ನನ್ನ ಮತ್ತು ನನ್ನ ಪ್ರೇಮಿಯ ನಡುವೆ ಯಾರೇ ಬಂದರೂ ಇದೇ ಗತಿ ಬರುತ್ತದೆ” ಎಂದು ಕಿರುಚಾಡಿದ್ದಾಳೆ. ತನ್ನ ಪ್ರಿಯಕರ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡ ಯುವತಿಯೊಬ್ಬರು ಮದುಮಕ್ಕಳ ಮಲಗುವ ಕೋಣೆಗೆ ನುಗ್ಗಿ ನವ ವಧುವಿನ ಕತ್ತು ಸೀಳಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಈ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಆಘಾತಕಾರಿ ಘಟನೆಯು ಸ್ಥಳೀಯವಾಗಿ ಆಘಾತ ಸೃಷ್ಟಿಸಿದ್ದು, ಚರ್ಚೆಯ ವಿಷಯವಾಗಿದೆ.
ತನ್ನ ಪ್ರಿಯಕರ ಬೇರೊಬ್ಬಳ ಜೊತೆ ಮದುವೆಯಾಗಿದ್ದಕ್ಕೆ ಕುಪಿತಳಾದ ಗೆಳತಿ ಆಕಯಿದ್ದ ಕೋಣೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಕೂಡಲೆ ಆಕೆಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಪೊಲೀಸರು ಹಲ್ಲೆ ಮಾಡಿದ ಪ್ರಿಯಾ ಶರ್ಮಾ ಎಂಬ ಯುವತಿಯನ್ನು ಆಕೆಯ ಪ್ರೇಮಿ ಬಬ್ಲು ಅನ್ಸಾರಿಯೊಂದಿಗೆ ಬಂಧಿಸಿದ್ದಾರೆ.