newsics.com
ನ್ಯೂಸಿಕ್ಸ್. ಕಾಂ
ಶುಭೋದಯ
ಈ ದಿನ- ನಿತ್ಯ ಪಂಚಾಂಗ
23-08-2024, ಶುಕ್ರವಾರ
ದಿನ ವಿಶೇಷ:
* ಜರಾ- ಜೀವಂತಿಕಾ ಪೂಜೆ
* ಗುಲಾಮರ ವ್ಯಾಪಾರದ ಸ್ಮರಣಾರ್ಥ ಅಂತಾರಾಷ್ಟ್ರೀಯ ದಿನ ಮತ್ತು ಅದರ ನಿರ್ಮೂಲನೆ.
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 23/08/2024
ತಿಂಗಳು – ಆಗಸ್ಟ್
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ ಚತುರ್ಥಿ 10:38:15
ಪಕ್ಷ- ಕೃಷ್ಣ
ನಕ್ಷತ್ರ- ರೇವತಿ 19:53:10
ಯೋಗ- ಶೂಲ 09:29:52
ಯೋಗ- ಗಂಡ 30:07:09*
ಕರಣ- ಬಾಳವ 10:38:15
ಕರಣ- ಕೌಳವ 21:11:51
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ಮೀನ till 19:53:10
ಚಂದ್ರ ರಾಶಿ ಮೇಷ from 19:53:10
ಸೂರ್ಯ ರಾಶಿ ಸಿಂಹ
ಋತು- ವರ್ಷ
ಸೂರ್ಯೋದಯ 06:09:14
ಸೂರ್ಯಾಸ್ತ 18:34:51
ಹಗಲಿನ ಅವಧಿ 12:25:36
ರಾತ್ರಿಯ ಅವಧಿ 11:34:27
ಚಂದ್ರಾಸ್ತ 09:23:22
ಚಂದ್ರೋದಯ 21:30:17
ರಾಹು ಕಾಲ 10:49 – 12:22 ಅಶುಭ
ಯಮಗಂಡ ಕಾಲ. 15:28 – 17:02 ಅಶುಭ
ಗುಳಿಕ ಕಾಲ 07:42 – 09:16
ಅಭಿಜಿತ್ 11:57 – 12:47 ಶುಭ
ದುರ್ಮುಹೂರ್ತ 08:38 – 09:28 ಅಶುಭ
ದುರ್ಮುಹೂರ್ತ 12:47 – 13:37 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ. ಪೂರ್ಣ ದುಃಖಿಯೂ ಅಲ್ಲ.
– ಗೌತಮ ಬುದ್ಧ
***
ಈ ದಿನದ ಸುಭಾಷಿತ
ನ ಗಂಗಾ ನ ಗಯಾ ಸೇತುಃ
ನ ಕಾಶೀ ನ ಚ ಪುಷ್ಕರಮ್ |
ಜಿಹ್ವಾಗ್ರೇ ವರ್ತತೇ ಯಸ್ಯ
ಹರಿರಿತ್ಯಕ್ಷರದ್ವಯಮ್ ||
(ಶ್ರೀಹರ್ಯಷ್ಟಕಮ್)
ಗಂಗೆಯಲ್ಲಿ ಸ್ನಾನ ಮಾಡಬೇಕಿಲ್ಲ, ಗಯಾ ಶ್ರಾದ್ಧದ ಅಗತ್ಯವಿಲ್ಲ, ರಾಮೇಶ್ವರಕ್ಕೆ ತೀರ್ಥಯಾತ್ರೆ ಬೇಕಿಲ್ಲ, ವಿಶ್ವನಾಥನನ್ನು ನಮಿಸಬೇಕಿಲ್ಲ, ಪುಷ್ಕರ (ಬ್ರಹ್ಮಸ್ಥಾನ)ತೀರ್ಥದಲ್ಲಿ ಮೀಯಬೇಕಿಲ್ಲ, ನಾಲಿಗೆಯಲ್ಲಿ ‘ಹರಿ’ ಎಂಬ ಎರಡು ಅಕ್ಷರಗಳು ನಲಿದರೆ ಸಾಕು! ಮೋಕ್ಷ ಖಚಿತ!
***
ದಿನ ಇತಿಹಾಸ
* ಆಗಸ್ಟ್ 23 – ಗುಲಾಮರ ವ್ಯಾಪಾರದ ಸ್ಮರಣಾರ್ಥ ಅಂತರರಾಷ್ಟ್ರೀಯ ದಿನ ಮತ್ತು ಅದರ ನಿರ್ಮೂಲನೆ.
* ಅಟ್ಲಾಂಟಿಕ್ ಸಾಗರದ ಗುಲಾಮರ ವ್ಯಾಪಾರದ ದುರಂತದ ಬಗ್ಗೆ ಎಲ್ಲಾ ಜನರ ನೆನಪಿಗಾಗಿ ಗುಲಾಮರ ವ್ಯಾಪಾರದ ದುರಂತದ ಬಗ್ಗೆ ನಮಗೆ ನೆನಪಿಸಲು ಪ್ರತಿವರ್ಷ 23 ಆಗಸ್ಟ್ನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಇದು ಐತಿಹಾಸಿಕ ಕಾರಣಗಳು ಮತ್ತು ಗುಲಾಮರ ವ್ಯಾಪಾರದ ಪರಿಣಾಮಗಳ ಬಗ್ಗೆ ಯೋಚಿಸಲು ಅವಕಾಶವನ್ನು ಒದಗಿಸುತ್ತದೆ.
ಪ್ರಮುಖ ಘಟನೆಗಳು:
* ಆಗಸ್ಟ್ 23, 1305 ರಂದು ಮೊದಲ ವರ್ಷಗಳಲ್ಲಿ ಸ್ಕಾಟಿಷ್ ರೆಸಿಸ್ಟೆನ್ಸ್ ಪಡೆಗಳನ್ನು ಮುನ್ನಡೆಸಿದ ನಾಯಕ ಸ್ಕಾಟಿಷ್ ದೇಶಪ್ರೇಮಿ ಸರ್. ವಿಲಿಯಂ ವಾಲೇಸ್ ನನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಿ ನಂತರ ಸೀಳಿ, ತಲೆ ಕಡಿದು ಉಳಿದ ದೇಹವನ್ನು ನಾಲ್ಕು ಭಾಗಗಳಾಗಿ ಕತ್ತರಿಸಲಾಯಿತು. ಮರುವರ್ಷವೇ 1306ರಲ್ಲಿ ರಾಬರ್ಟ್ ಬ್ರೂಸ್ ದಂಗೆಯೆದ್ದು ಸ್ಕಾಟ್ ಲ್ಯಾಂಡಿಗೆ ಸ್ವಾತಂತ್ರ್ಯ ತಂದುಕೊಟ್ಟ.
* ಆಗಸ್ಟ್ 23, 1573 ರಂದು ಅಕ್ಬರ್ ರಾಜ್ಯದಲ್ಲಿ ವ್ಯಾಪಿಸಿದ ದಂಗೆಯ ಸುದ್ದಿ ಕೇಳಿ ಆಗ್ರಾವನ್ನು ಬಿಟ್ಟು ಅಹಮದಾಬಾದಿಗೆ ಹೊರಟರು. 11 ದಿನಗಳ ಬಳಿಕ ಆತ ಅಹಮದಾಬಾದ್ ತಲುಪಿದರು.
* ಆಗಸ್ಟ್ 23, 1879 ರಂದು ನವರೋಜಿ ವಾಡಿಯಾ ಅವರು ಮುಂಬೈಯಲ್ಲಿ ಬಾಂಬೆ ಡೈಯಿಂಗ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್ ನ್ನು ಸ್ಥಾಪಿಸಿದರು.
* ಆಗಸ್ಟ್ 23, 1943 ರಂದು ಇತಿಹಾಸದಲ್ಲೇ ಅತಿದೊಡ್ಡ ‘ಟ್ಯಾಂಕ್ ಸಮರ’ ಎಂದೇ ಖ್ಯಾತಿ ಪಡೆದ ‘ಕರ್ಸ್ಕ್ ಕದನ’ ಕೊನೆಗೊಂಡಿತು. 6000 ಟ್ಯಾಂಕುಗಳು, 2 ಲಕ್ಷ ಪಡೆಗಳು ಮತ್ತು 4000 ಯುದ್ಧ ವಿಮಾನಗಳನ್ನು ಈ ಕದನದಲ್ಲಿ ಬಳಸಲಾಗಿತ್ತು. ಜುಲೈ 5 ರಂದು ಆರಂಭವಾದ ಈ ಕದನ ಎರಡನೇ ಜಾಗತಿಕ ಸಮರ ಕಾಲದಲ್ಲಿ ರಷ್ಯದ ಪಶ್ಚಿಮ ಭಾಗದಲ್ಲಿ ಜರ್ಮನಿ ನಡೆಸಿದ ಅಯಶಸ್ವಿ ದಾಳಿ ಎನಿಸಿತು. ಕರ್ಸ್ಕ್ ನಗರಕ್ಕಾಗಿ ನಡೆದ ಈ ಕದನದ ಸೋಲು ಜರ್ಮನಿಯ ದಾಳಿ ಸಾಮರ್ಥ್ಯವನ್ನು ಕುಗ್ಗಿಸಿ, ಅದರ ಪೂರ್ವ ಭಾಗದ ಮೇಲಿನ 1944-45ರ ಸೋವಿಯತ್ ದಾಳಿಗಳಿಗೆ ದಾರಿ ಸುಗಮಗೊಳಿಸಿತು.
* ಆಗಸ್ಟ್ 23, 2006 ರಂದು ಹೆಸರಾಂತ ಮಲೆಯಾಳಿ ಕವಿ ಡಾ. ಕೆ. ಅಯ್ಯಪ್ಪ ಪಣಿಕ್ಕರ್ ಅವರು ತಿರುವನಂತಪುರದಲ್ಲಿ ನಿಧನರಾದರು. ಕೇರಳ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಭಾರತೀಯ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ, ಕಲೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಮಲೆಯಾಳಿ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದ ಪಣಿಕ್ಕರ್ ಅವರ ‘ಕುರುಕ್ಷೇತ್ರಂ’ ಕಾವ್ಯ ಮಲೆಯಾಳಿ ಸಾಹಿತ್ಯಕ್ಕೆ ತಿರುವು ತಂದ ಕೃತಿ.