newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
08-08-2024, ಗುರುವಾರ
ದಿನ ವಿಶೇಷ:
* ನಾಗ ಚತುರ್ಥಿ, ವಿನಾಯಕ ಚತುರ್ಥಿ
* ಕ್ವಿಟ್ ಇಂಡಿಯಾ ದಿನ
* ವಿಶ್ವ ಬೆಕ್ಕು ದಿನ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 08/08/2024
ತಿಂಗಳು – ಆಗಸ್ಟ್
ಬಣ್ಣ – ಹಸಿರು
ವಾರ – ಗುರುವಾರ
ತಿಥಿ – ಚತುರ್ಥಿ 24:36:01*
ಪಕ್ಷ – ಶುಕ್ಲ
ನಕ್ಷತ್ರ – ಉತ್ತರ ಫಾಲ್ಗುಣಿ 23:32:55
ಯೋಗ – ಶಿವ 12:37:24
ಕರಣ – ವಾಣಿಜ 11:19:03
ಕರಣ – ವಿಷ್ಟಿ (ಭದ್ರ) 24:36:01*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ಕರ್ಕಾಟಕ
ಋತು – ವರ್ಷ
ಸೂರ್ಯೋದಯ 06:07:38
ಸೂರ್ಯಾಸ್ತ 18:42:39
ಹಗಲಿನ ಅವಧಿ 12:35:01
ರಾತ್ರಿಯ ಅವಧಿ 11:25:07
ಚಂದ್ರೋದಯ 08:59:50
ಚಂದ್ರಾಸ್ತ 21:20:19
ರಾಹು ಕಾಲ 13:59 – 15:34 ಅಶುಭ
ಯಮಗಂಡ ಕಾಲ. 06:08 – 07:42 ಅಶುಭ
ಗುಳಿಕ ಕಾಲ 09:16 – 10:51
ಅಭಿಜಿತ್ 11:59 – 12:50 ನಶುಭ
ದುರ್ಮುಹೂರ್ತ 10:19 – 11:10 ಅಶುಭ
ದುರ್ಮುಹೂರ್ತ 15:21 – 16:12 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಪ್ರೇಮದಲ್ಲಿ ಸದಾ ಒಂದು ಹುಚ್ಚುತನ ಇದೆ. ಆ ಹುಚ್ಚುತನದಲ್ಲಿಯೂ ಇದೆ ಒಂದು ವಿವೇಕ.
– ಫ್ರೆಡರಿಕ್ ನೀಷೆ
***
ಇಂದಿನ ಇತಿಹಾಸ
08 ಆಗಸ್ಟ್
ವಿಶ್ವ ಬೆಕ್ಕು ದಿನ
ಆಗಸ್ಟ್ 08 ರಂದು ಇಡೀ ವಿಶ್ವದಾದ್ಯಂತ ವಿಶ್ವ ಬೆಕ್ಕು ದಿನವನ್ನು ಆಚರಿಸುತ್ತದೆ. ಬೆಕ್ಕು (ವೈಜ್ಞಾನಿಕ ಹೆಸರು ಫೆಲಿಸ್ ಕ್ಯಾಟಸ್) ಒಂದು ಚಿಕ್ಕ ಪರಭಕ್ಷಕ ಮತ್ತು ಮಾಂಸಾಹಾರಿ ಸಸ್ತನಿ ಕಾರ್ನಿವೊರ ಕುಟುಂಬಕ್ಕೆ ಸೇರಿದ ಸಾಕುಪ್ರಾಣಿ. ಇದು ಕ್ರಿಮಿ ಕೀಟಗಳು, ಹಾವುಗಳು, ಚೇಳು, ಇಲಿ ಮತ್ತು ಇನ್ನಿತರ ಕೀಟಗಳನ್ನು ಬೇಟೆಯಾಡುವುದರಿಂದ ಮನುಷ್ಯನ ಸಂಗಾತಿಯಾಗಿದೆ. ಇದು ಸುಮಾರು 9500 ವರ್ಷಗಳಿಂದ ಮಾನವನೊಂದಿಗೆ ಸಹಕರಿಸುತ್ತಿದೆ.
ಪ್ರಮುಖ ಘಟನೆಗಳು
* ಮತ್ತೂರು ಕೃಷ್ಣಮೂರ್ತಿ – ಆಗಸ್ಟ್ 08, 1929 ರಂದು ಶಿವಮೊಗ್ಗ ಜಿಲ್ಲೆ ಮಾಥುರ್ ಗ್ರಾಮದಲ್ಲಿ ಜನಿಸಿದರು. ಇವರು ರಾಮಾಯಣ, ಮಹಾಭಾರತ, ಮತ್ತು ಭಾಗವತ ಪುರಾಣದಲ್ಲಿ ಅಧ್ಯಯನವನ್ನು ಹೊಂದಿದ್ದರು. ಇವರು ಬಹಳವಾಗಿ ಗಮಕ ಕಲಾವಿದರಾದ ರಾಮಶಾಸ್ತ್ರಿ ಮತ್ತು ಲಕ್ಷ್ಮಿ ಕೇಶವ ಶಾಸ್ತ್ರಿ ಅವರಿಂದ ಪ್ರಭಾವಿತರಾಗಿದ್ದರು. ಸ್ವಾತಂತ್ರ್ಯಹೋರಾಟದಲ್ಲಿ ಅವರ ಭಾಗವಹಿಸುವಿಕೆ ಅವರಿಗೆ ತಮಿಳು ಮತ್ತು ಹಿಂದಿ ಕಲಿಯಲು ಅನುಕೂಲ ಕಲ್ಪಿಸಿತು. ಸಂಸ್ಕೃತ ವಿದ್ವಾಂಸರಾದ ಇವರು ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ಸಲ್ಲಿಸಿದ್ದಾರೆ. ಏಪ್ರಿಲ್ 2009ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಅನನ್ಯ ಸೇವೆಗಾಗಿ ಡಿಸೆಂಬರ್ 2004ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು, ಡಾಕ್ಟರೇಟ್ ಪದವಿಯನ್ನು ಕೊಟ್ಟೂ ಗೌರವಿಸಿದ್ದಾರೆ. ಅವರು 6-10-2011 ರಂದು 82ನೇ ವಯಸ್ಸಿನಲ್ಲಿ ನಿಧನರಾದರು.
* ಭಾರತ ಬಿಟ್ಟು ತೊಲಗಿ ಚಳವಳಿ – ಭಾರತ ಬಿಟ್ಟು ತೊಲಗಿ ಚಳುವಳಿಯು ಒಂದು ಅಸಹಕಾರ ಚಳವಳಿಯಾಗಿದ್ದು ಆಗಸ್ಟ್ 08, 1942ರಲ್ಲಿ ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆಯಿತು. ಇದರ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು. 08 ಆಗಸ್ಟ್ ರಂದು ಮುಂಬಯಿಯ ಗೊವಾಳಿಯ ಮೈದಾನ (ಇಂದಿನ ಹೆಸರು – ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು.
* ವಿಜ್ಞಾನಿ ಮತ್ತು ನೋಬಲ್ ಪ್ರಶಸ್ತಿ ವಿಜೇತರಾದ ಡಾ. ಯಲ್ಲಾ ಪ್ರಗಡ ಸುಬ್ಬರಾವ್ ಅವರು ಆಗಸ್ಟ್ 08, 1948 ರಂದು ನಿಧನರಾದರು. ಯಲ್ಲಾ ಪ್ರಗಡ ಸುಬ್ಬರಾವ್ ಅವರು ಅಡೆನೋಸೀನ್ ಟ್ರೈಫಾಸ್ಫೇಟ್ (ಎ ಟಿ ಪಿ) ಅನ್ನು ಕೋಶದಲ್ಲಿ ಶಕ್ತಿಯ ಮೂಲವಾಗಿ ಪತ್ತೆಹಚ್ಚಿದ ಭಾರತೀಯ ಜೀವರಸಾಯನ ಶಾಸ್ತ್ರಜ್ಞರಾಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಮೆಥೊಟ್ರೆಕ್ಸೇಟ್ ಅನ್ನು ಅಭಿವೃದ್ಧಿಪಡಿಸಿದಲ್ಲದೆ ಔರೋಮೈಸಿನ್ ಮತ್ತು ಟೆಟ್ರಾಸೈಕ್ಲಿನ್ ಸೇರಿದಂತೆ ವ್ಯಾಪಕವಾದ ಪ್ರತಿಜೀವಿಕಗಳನ್ನು ಕಂಡುಹಿಡಿದಿದ್ದಾರೆ.
* ಆಗಸ್ಟ್ 08, 2000 ರಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನಿಧನರಾದರು.