newsics.com
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರು ತಮ್ಮ ತೀರ್ಪುಗಳಿಂದ ದೇಶದಲ್ಲಿ ಪ್ರಮುಖ ಬದಲಾವಣೆಗಳನ್ನೇ ತಂದವರು. ಆದ್ರೆ, ತಮ್ಮ ವಿಶೇಷಚೇತನ ಮಗಳಿಂದ ತಾವು ಸಸ್ಯಾಹಾರಿಯಾಗಿ ಬದಲಾದ ವಿಷಯವನ್ನು ಖುದ್ದು ನ್ಯಾ.ಡಿ.ವೈ. ಚಂದ್ರಚೂಡ್ ಅವರೇ ತಿಳಿಸಿದ್ದಾರೆ.
ದೇಶದ ಅದೆಷ್ಟೋ ಘಟನೆಗಳಿಗೆ ತೀರ್ಪು ಬರೆದು, ಡಿ.ವೈ.ಚಂದ್ರಚೂಡ್ ಅವರು ಗಮನ ಸೆಳೆದಿದ್ದಾರೆ. ತನ್ನ ಮಗಳಿಂದಾಗಿ ಕೆಲವು ದಿನಗಳ ಹಿಂದಷ್ಟೇ ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ. ಕೇವಲ ಆಹಾರದಲ್ಲಷ್ಟೇ ಅಲ್ಲ, ಬಳಸುವ ವಸ್ತುಗಳಲ್ಲೂ ಅವರ ಕುಟುಂಬ ಸಸ್ಯಾಹಾರಿಯೇ. ಅವರಾಗಲೀ, ಪತ್ನಿಯಾಗಲೀ ಲೆದರ್ ಬ್ಯಾಗ್ಗಳನ್ನೂ ಬಳಸುವುದಿಲ್ಲ.
ನನ್ನ ಮಗಳೇ ನನಗೆ ಕ್ರೌರ್ಯ ಮುಕ್ತ ಜೀವನದ ಪಾಠ ಮಾಡಿದ್ದು, ನಂತರ ತಾವು ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಗಿರುವುದಾಗಿ ನ್ಯಾ. ಚಂದ್ರಚೂಡ ಅವರೇ ತಿಳಿಸಿದ್ದಾರೆ.