newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
02 ಆಗಸ್ಟ್ 2024, ಶುಕ್ರವಾರ
ದಿನ ವಿಶೇಷ:
* ಮಾಸ ಶಿವರಾತ್ರಿ
* ರಾಷ್ಟ್ರೀಯ ಬಣ್ಣ ಪುಸ್ತಕಗಳ ದಿನ
* ಸಂತ ನಾಮದೇವ ಪುಣ್ಯತಿಥಿ
* ಸಂತ ಜನಾಬಾಯಿ ಪುಣ್ಯತಿಥಿ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 02/08/2024
ತಿಂಗಳು – ಆಗಸ್ಟ್
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ತ್ರಯೋದಶಿ 15:26:07
ಪಕ್ಷ – ಕೃಷ್ಣ
ನಕ್ಷತ್ರ – ಆರ್ದ್ರ 10:57:48
ಯೋಗ – ಹರ್ಷಣ 11:43:51
ಕರಣ – ವಾಣಿಜ 15:26:07
ಕರಣ – ವಿಷ್ಟಿ (ಭದ್ರ) 27:34:41*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ – ಮಿಥುನ till 29:40:28*
ಚಂದ್ರ ರಾಶಿ – ಕರ್ಕಾಟಕ from 29:40:28*
ಸೂರ್ಯ ರಾಶಿ – ಕರ್ಕಾಟಕ
ಋತು – ಗ್ರೀಷ್ಮ
ಸೂರ್ಯೋದಯ 06:06:36
ಸೂರ್ಯಾಸ್ತ 18:45:00
ಹಗಲಿನ ಅವಧಿ 12:38:23
ರಾತ್ರಿಯ ಅವಧಿ 11:21:47
ಚಂದ್ರಾಸ್ತ 17:19:53
ಚಂದ್ರೋದಯ 28:51:46*9
ರಾಹು ಕಾಲ 10:51 – 12:26 ಅಶುಭ
ಯಮಗಂಡ ಕಾಲ 15:35 – 17:10 ಅಶುಭ
ಗುಳಿಕ ಕಾಲ 07:41 – 09:16
ಅಭಿಜಿತ್ 12:01 – 12:51 ಶುಭ
ದುರ್ಮುಹೂರ್ತ 08:38 – 09:29 ಅಶುಭ
ದುರ್ಮುಹೂರ್ತ 12:51 – 13:42 ಅಶುಭ
***

***
ಈ ದಿನದ ಮಾತು
ನೆಮ್ಮದಿಯ ಜೀವನಕ್ಕೆ
ರಾಗ-ದ್ವೇಷ; ರೋಗ-ದೋಷ
ಮುಕ್ತರಾಗುವುದೇ ಮಾರ್ಗ.
***
ಇಂದಿನ ಇತಿಹಾಸ
02 ಆಗಸ್ಟ್
ರಾಷ್ಟ್ರೀಯ ಬಣ್ಣ ಪುಸ್ತಕಗಳ ದಿನ
ಬಣ್ಣ ಪುಸ್ತಕಗಳು, ಬಣ್ಣದ ಚಿತ್ರಗಳನ್ನು ಹೊಂದಿರುವ ಪುಸ್ತಕಗಳು ಇತ್ಯಾದಿ ಮಕ್ಕಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಆದರೆ, ವಯಸ್ಕರು ಇದರಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲ. ಒತ್ತಡವನ್ನು ಕಡಿಮೆ ಮಾಡಲು ಬಣ್ಣವೇ ಅತ್ಯುತ್ತಮ ಔಷಧ ಎಂದು ಅನೇಕ ಮನೋವೈದ್ಯರು ಹೇಳಿಕೊಂಡಿದ್ದಾರೆ.
ಆದ್ದರಿಂದ, ಪ್ರತಿಯೊಬ್ಬರೂ ಇದನ್ನು ಅನುಸರಿಸುವಂತೆ ಮಾಡುವ ಉದ್ದೇಶದಿಂದ ಪ್ರತಿ ವರ್ಷ ರಾಷ್ಟ್ರೀಯ ಬಣ್ಣ ಪುಸ್ತಕಗಳ ದಿನವನ್ನು ಆಗಸ್ಟ್ 02ರಂದು ಆಚರಿಸಲಾಗುತ್ತದೆ.
ಪ್ರಮುಖ ಘಟನೆಗಳು
* ಆಗಸ್ಟ್ 02, 1790 ರಂದು ಅಮೆರಿಕದ ಮೊದಲ ಜನಗಣತಿ.
* ಡಿ. ಸಿ. ಪಾವಟೆ – ಆಗಸ್ಟ್ 02, 1899ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಮದಾಪುರದಲ್ಲಿ ಜನಿಸಿದರು. ದಾನಪ್ಪ ಚಿಂತಪ್ಪ ಪಾವಟೆ ಅವರು ಡಿ. ಸಿ. ಪಾವಟೆ ಎಂಬ ಹೆಸರಿನಿಂದ ದಕ್ಷ ಆಡಳಿತಗಾರರಾಗಿ, ಶಿಕ್ಷಣತಜ್ಞರಾಗಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರ ಬುನಾದಿ ಹಾಕಿದವರಾಗಿ, ಪಂಜಾಬ್ನ ರಾಜ್ಯಪಾಲರಾಗಿ ಹೀಗೆ ವಿವಿಧ ರೀತಿಯಲ್ಲಿ ನಾಡಿನಲ್ಲಿ ಪ್ರಖ್ಯಾತರಾಗಿದ್ದಾರೆ. ಡಿ. ಸಿ. ಪಾವಟೆಯವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ ಗುರುತಿಸಿ ಭಾರತ ಸರ್ಕಾರವು 1967ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 1999ರಿಂದ ಕೇಂಬ್ರಿಡ್ಜ್ ನಲ್ಲಿ ಸಿಡ್ನಿ ಸಸೆಕ್ಸ್ ಕಾಲೇಜಿನಲ್ಲಿ ಡಿ. ಸಿ. ಪಾವಟೆಯವರ ಸ್ಮರಣಾರ್ಥ ಕರ್ನಾಟಕದ ಪ್ರತಿಭಾವಂತ ಪದವೀಧರರಿಗೆ 4 ತಿಂಗಳ ಪ್ರವಾಸ- ಪ್ರತಿಭಾವೇತನ ನೀಡಲಾಗುತ್ತದೆ.
* ಅಲೆಕ್ಸಾಂಡರ್ ಗ್ರಹಾಂ ಬೆಲ್ – ಆಗಸ್ಟ್ 02, 1922ರಂದು ನಿಧನರಾದರು. ಒಬ್ಬ ಉತ್ಕೃಷ್ಟ ವಿಜ್ಞಾನಿ, ಆವಿಷ್ಕಾರಕ, ಎಂಜಿನಿಯರ್ ಮತ್ತು ಹೊಸತನದ ಪ್ರವರ್ತಕ ರಾಗಿದ್ದರು. ಮೊದಲ ಕಾರ್ಯೋಪಯೋಗಿ ದೂರವಾಣಿಯನ್ನು ಸೃಷ್ಟಿಸಿದ ಕೀರ್ತಿ ಇವರಿಗೆ ದೊರಕಿದೆ.
* ಅಮೆರಿಕದ 29ನೇ ಅಧ್ಯಕ್ಷ ವಾರೆನ್ ಜಿ. ಹಾರ್ಡಿಂಗ್ ಅವರು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಆಗಸ್ಟ್ 02, 1923 ರಂದು ನಿಧನರಾದರು.
* ಆಗಸ್ಟ್ 02, 1934 ರಂದು, ಹಿಟ್ಲರ್ ಜರ್ಮನಿಯ ಅಧ್ಯಕ್ಷರಾದರು.
* ನಾ. ದಾಮೋದರ ಶೆಟ್ಟಿ – 1951 ರ ಆಗಸ್ಟ್ 02ರಂದು ಹುಟ್ಟಿದರು. ಕವಿ, ನಟ, ನಾಟಕಕಾರ, ಸಾಹಿತಿ ನಾ.ದಾಮೋದರ ಶೆಟ್ಟಿಯವರು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯವರು. ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ ಹಲವಾರು ನಾಟಕಗಳನ್ನೂ ರಂಗದ ಮೇಲೆ ತಂದು ಪ್ರದರ್ಶಿಸಿದ್ದಾರೆ.