newsics.com/ನ್ಯೂಸಿಕ್ಸ್
ಮಾಲೀಕನ ಸಾವಿಗೆ ತಾನೇ ಕಾರಣ ಎಂದು ಭಾವಿಸಿ ಹಸುವೊಂದು ಕಳೆದ 10 ದಿನಗಳಿಂದ ಆಹಾರ ಮತ್ತು ನೀರು ಬಿಟ್ಟು ಕಣ್ಣೀರು ಹಾಕುತ್ತಿದೆ.ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ರೆಮುನಾ ಬ್ಲಾಕ್ನ ಖುಸಾಲಿಗಂಜ್ ಗ್ರಾಮದಲ್ಲಿ ನಡೆದಿದೆ.
https://youtube.com/shorts/eOoYZp9a9F0?si=CP6V90gKWCTFTFCS
ರೆಮುನಾ ಬ್ಲಾಕ್ನ ಖುಸಾಲಿಗಂಜ್ ಗ್ರಾಮದಲ್ಲಿ ರಾಮಚಂದ್ರ ಮಹಾರಾಣ ಮತ್ತು ಸುನಿತಿ ಮಹಾರಾಣ ದಂಪತಿ ತಮ್ಮ ದನದ ಕೊಟ್ಟಿಗೆಯಲ್ಲಿ 5 ರಿಂದ 6 ಹಸುಗಳನ್ನು ಸಾಕುತ್ತಿದ್ದರು. ಸುಮಾರು ಐದು ವರ್ಷಗಳ ಹಿಂದೆ, ತಮ್ಮ ಕೊಟ್ಟಿಗೆಯಲ್ಲಿ ಜನಿಸಿದ ಕರುವನ್ನು ದಂಪತಿ ಬಹಳ ಪ್ರೀತಿಯಿಂದ ಸಾಕಿದ್ದರು.
ಆದರೆ ಇತ್ತೀಚೆಗೆ ಗ್ರಾಮದ ಯುವಕನೊಬ್ಬ ಸಾಕಲು ತನಗೆ ಒಂದು ಹಸು ನೀಡುವಂತೆ ದಂಪತಿಯನ್ನು ಮನವಿ ಮಾಡಿದ್ದರು. ಆಗ ರಾಮಚಂದ್ರ ಅವರು, ತಾವು 5 ವರ್ಷದಿಂದ ಸಾಕಿದ್ದ ಹಸುವನ್ನು ಉಡುಗೊರೆಯಾಗಿ ಆತನಿಗೆ ನೀಡಿದ್ದರು. ಅಂತೆಯೇ ಯುವಕ ಕರೆದೊಯ್ಯುತ್ತಿದ್ದಾಗ, ಮಾಲೀಕನ ಬಿಟ್ಟಿರಲಾರದೇ ದಾರಿ ಮಧ್ಯೆ ಹಸು ಹಗ್ಗ ಹರಿದುಕೊಂಡು ಮರಳಿ ಮಾಲೀಕನ ಮನೆಯತ್ತ ಓಡಲು ಆರಂಭಿಸಿತ್ತು. ದುರದೃಷ್ಟವಶಾತ್ ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಮಾಲೀಕ ರಾಮಚಂದ್ರನಿಗೆ ಹಸು ಆಕಸ್ಮಿಕವಾಗಿ ಗುದ್ದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇದೇ ನೋವಲ್ಲಿ ಮಾಲೀಕನ ಮೃತಪಟ್ಟ ದಿನದಿಂದ ಹಸು ಆಹಾರ ಮತ್ತು ನೀರು ನಿಲ್ಲಿಸಿದೆ. ಒಂದೇ ಸ್ಥಳದಲ್ಲಿ ಏಕಾಂಗಿ ನಿಂತಿದ್ದು, ಹತ್ತಿರಕ್ಕೆ ಯಾರನ್ನೂ ಸೇರಿಸುತ್ತಿಲ್ಲ. ಮಾಲೀಕನ ಮೃತಪಟ್ಟು 10 ದಿನವಾದ್ರೂ ಹಸು ಮಾತ್ರ ದುಃಖದಿಂದ ಹೊರಬಂದಿಲ್ಲ.
https://www.newsics.com/2026/04/28/thunderstorms-and-hailstorm-orange-alert-for-six-districts/