newsics.com
ಜೈಪುರ: ಪ್ರಧಾನಿ ನರೇಂದ್ರ ಮೋದಿ ನಾಳೆ ಮಂಗಳವಾರ ಉದ್ಘಾಟಿಸಲಿದ್ದ ತೈಲಸಂಗ್ರಹಣಾ ಘಟದಲ್ಲಿ ಭೀಕರ ಬೆಂಕಿ ಅವಘಡ ಸಂಭಿಸಿರುವ ಘಟನೆ ರಾಜಸ್ಥಾನದ ರಾಜಸ್ಥಾನದ ಬಲೋತ್ರಾದಲ್ಲಿ ನಡೆದಿದೆ.
ಭಾರತದ ಮೊದಲ ಸಮಗ್ರ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಸಂಕೀರ್ಣ ಘಟಕ ಇದಾಗಿದ್ದು, ಉದ್ಘಟನೆಗೆ ಒಂದು ದಿನ ಮೊದಲು ಅಂದರೆ ಇಂದು ಈ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಈ ಯೋಜನೆಯು 79,450 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯನ್ನು ಒಳಗೊಂಡಿದೆ. ಇದು ಈ ಪ್ರದೇಶದ ಅತಿದೊಡ್ಡ ಕೈಗಾರಿಕಾ ಅಭಿವೃದ್ಧಿಗಳಲ್ಲಿ ಒಂದಾಗಿದೆ.