newsics.com
ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕಾಂತಾರ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಜೊತೆಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಚಿತ್ರಕ್ಕೂ ಎರಡು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. 2022ನೇ ಸಾಲಿನಲ್ಲಿ ತೆರೆಕಂಡ ಚಿತ್ರಗಳನ್ನೊಳಗೊಂಡ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಕನ್ನಡ ಚಿತ್ರರಂಗ ಕಮಾಲ್ ಮಾಡಿದೆ.
ಸ್ಯಾಂಡಲ್ವುಡ್ಗೆ ರಾಷ್ಟ್ರೀಯ ಅವಾರ್ಡ್ ಬಂದಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ. ಜೊತೆಗೆ ಇತ್ತೀಚೆಗೆ ಮಾಡಿದ ಹೋಮ ಹವನದಿಂದ ಅಚ್ಚರಿಯ ಬೆಳವಣಿಗೆಯಾಗುತ್ತಿದೆ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.
ಕನ್ನಡ ಚಿತ್ರಕ್ಕೆ ಪ್ರಶಸ್ತಿಗಳ ಲಭಿಸಿದ್ದು, ಸುನೀಲ್ ಪುರಾಣಿಕ್ ನಿರ್ದೇಶನದ ರಂಗವಿಭೋಗ ಸಿನಿಮಾ ಬೆಸ್ಟ್ ಆರ್ಟ್ ಕಲ್ಚರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಮಧ್ಯಂತರ ಸಿನಿಮಾದ ನಿರ್ದೇಶಕ ದಿನೇಶ್ ಶೆಣೈಗೆ ಬೆಸ್ಟ್ ಡೆಬ್ಯುಟ್ ಫಿಲಂ ಡೈರೆಕ್ಚರ್ ಪ್ರಶಸ್ತಿ ದೊರಕಿದೆ. ಜೊತೆಗೆ ಚಿತ್ರದ ಎಡಿಟರ್ ಸುರೇಶ್ ಅರಸ್ ಅವರಿಗೆ ಬೆಸ್ಟ್ ಎಡಿಟಿಂಗ್ ಪ್ರಶಸ್ತಿ ಕೂಡ ಲಭಿಸಿದೆ.