Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ನನ್ನ ಕೊನೆಯ ಆಸೆ ಈಡೇರಿಸು, ದೈಹಿಕ​ ಸಂಬಂಧ ಬೆಳೆಸುವಂತೆ ಶಿಕ್ಷಕಿಗೆ ಬೇಡಿಕೆಯಿಟ್ಟ ವ್ಯಕ್ತಿ..!
ಕರ್ನಾಟಕ

ನನ್ನ ಕೊನೆಯ ಆಸೆ ಈಡೇರಿಸು, ದೈಹಿಕ​ ಸಂಬಂಧ ಬೆಳೆಸುವಂತೆ ಶಿಕ್ಷಕಿಗೆ ಬೇಡಿಕೆಯಿಟ್ಟ ವ್ಯಕ್ತಿ..!

Share
2 Min Read
SHARE

ಒಂದು ವರ್ಷದ ಹಿಂದೆ ಪುಟ್ಟಪರ್ತಿ ಮೂಲದ ಅರ್ಷಾದ್ ಎಂಬಾತನು ಬೆಂಗಳೂರಿನ ಶಿಕ್ಷಕಿಯೊಬ್ಬರಿಗೆ ವಾಟ್ಸಾಪ್ ಮೂಲಕ ಅನಾಮಧೇಯ ಸಂದೇಶ ಕಳುಹಿಸಿದ್ದಾನೆ. “ನಾನು ನಿನ್ನ ಹಳೆಯ ಕ್ಲಾಸ್‌ಮೇಟ್” ಎಂದು ಪರಿಚಯಿಸಿಕೊಂಡ ಆತ, ಆರಂಭದಲ್ಲಿ ಸ್ನೇಹಪೂರ್ಣವಾಗಿ ಮಾತುಕತೆ ನಡೆಸಿ, ಶಿಕ್ಷಕಿಯ ವಿಶ್ವಾಸವನ್ನು ಗಳಿಸಿದ್ದಾನೆ. ಈ ಮಾತುಗಳನ್ನು ನಂಬಿದ ಶಿಕ್ಷಕಿ ಸಹ ಅವನೊಂದಿಗೆ ಚಾಟ್ ಮುಂದುವರೆಸಿದ್ದರು.

ಕೆಲ ದಿನಗಳ ಬಳಿಕ, ತಾನು ಕ್ಯಾನ್ಸರ್‌ ರೋಗಿ ಎಂದು ಹೇಳಿಕೊಂಡ ಆರೋಪಿ, ಶಿಕ್ಷಕಿಯ ಸಹಾನುಭೂತಿಯನ್ನು ಪಡೆದುಕೊಂಡಿದ್ದಾನೆ. ಈ ನೆಪದಲ್ಲಿ ಅವಳಿಂದ ಆಗಾಗ ಹಣ ಸಹಾಯ ಪಡೆಯಲು ಆರಂಭಿಸಿದ್ದಾನೆ. ಹಂತ ಹಂತವಾಗಿ ಆಕೆಯ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಳ್ಳಲು ಮಾಸ್ಟರ್‌ ಪ್ಲಾನ್ ರೂಪಿಸಿದ್ದಾನೆ.

ನಂತರ “ನಾನು ಕ್ಯಾನ್ಸರ್ ರೋಗಿ, ನನ್ನ ಕೊನೆಯ ಆಸೆ ಈಡೇರಿಸು” ಎಂದು ಹೇಳಿ, ಶಿಕ್ಷಕಿಯೊಂದಿಗೆ ದೈಹಿಕ ಸಂಪರ್ಕ ಹೊಂದಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಶಿಕ್ಷಕಿ ಇದನ್ನು ನಿರಾಕರಿಸಿದಾಗ, ಕನಿಷ್ಠ ನಗ್ನ ವಿಡಿಯೋ ಕಳುಹಿಸು ಎಂದು ಒತ್ತಾಯಿಸಿದ್ದಾನೆ. ಕೊನೆಯ ಆಸೆ ಪಾಪ ಎಂದು ಅವನ ಮಾತುಗಳನ್ನು ನಂಬಿದ ಶಿಕ್ಷಕಿ ತನ್ನ ನಗ್ನ ವಿಡಿಯೋವನ್ನು ಕಳುಹಿಸಿದ್ದಾರೆ.

ವಿಡಿಯೋ ಕೈಗೆ ಸಿಕ್ಕ ತಕ್ಷಣ, ಆರೋಪಿ ತನ್ನ ವರಸೆ ಬದಲಿಸಿದ್ದು, ಆ ವಿಡಿಯೋವನ್ನು ಬಳಸಿಕೊಂಡು ಶಿಕ್ಷಕಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾ, ಹಣ ಮತ್ತು ಲೈಂಗಿಕ ಸಂಪರ್ಕಕ್ಕಾಗಿ ಒತ್ತಡ ಹೇರಿದ್ದಾನೆ.

ಈ ಹಿಂಸೆ ಸಹಿಸಲು ಸಾಧ್ಯವಾಗದೆ, ಶಿಕ್ಷಕಿ ತನ್ನ ಸ್ನೇಹಿತರ ಬಳಿ ವಿಷಯವನ್ನು ಹಂಚಿಕೊಂಡಿದ್ದಾರೆ. ನಂತರ ಸ್ನೇಹಿತರ ಸಹಾಯದಿಂದ ಆರೋಪಿಯನ್ನು ಬಲೆಗೆ ಬೀಳಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿಗೆ ಬಂದರೆ ನೀನು ಹೇಳಿದಂತೆ ಕೇಳುವುದಾಗಿ ಹೇಳಿ ನಂಬಿಕೆ ಮೂಡಿಸಿ, ಆರೋಪಿಯನ್ನು ಬೆಂಗಳೂರಿಗೆ ಬರುವಂತೆ ಪ್ಲಾನ್ ಮಾಡಲಾಗುತ್ತದೆ.

ಯೋಜನೆ ಪ್ರಕಾರ ಆಂಧ್ರಪ್ರದೇಶದ ಪುಟ್ಟಬರ್ತಿಯಿಂದ ಬೆಂಗಳೂರಿಗೆ ಬಂದ ಆರೋಪಿ, ಶಿಕ್ಷಕಿ ಭೇಟಿಯಾಗಿದ್ದಾನೆ. ಆದರೆ ಸ್ಥಳಕ್ಕೆ ಬಂದ ನಂತರ, ಶಿಕ್ಷಕಿ ಹಾಗೂ ಆಕೆಯ ಸ್ನೇಹಿತರು ಆತನನ್ನು ಹಿಡಿದು ಪೊಲೀಸರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಆರೋಪಿ ದೂರು ನೀಡದಂತೆ ಮನವಿ ಮಾಡಿದರೂ, ಶಿಕ್ಷಕಿ ಅದನ್ನು ನಿರಾಕರಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿ, ತನ್ನ ಬಳಿ ಇದ್ದ ಬ್ಯಾಗ್‌ನಿಂದ ರೇಜರ್ ಬ್ಲೇಡ್ ತೆಗೆದು, ತಾನೇ ತನ್ನ ಕೈ ಹಾಗೂ ಮರ್ಮಾಂಗವನ್ನು ಕತ್ತರಿಸಿಕೊಂಡು ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ.

ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು, ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಬಳಿಕ, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮುಂದುವರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ವಂಚನೆ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಟ್ಟಾರೆ, ಆನ್‌ಲೈನ್‌ ಸ್ನೇಹ ಮತ್ತು ಸಹಾನುಭೂತಿಯ ದುರ್ಬಳಕೆಯಿಂದ ಹೇಗೆ ಅಪಾಯ ಸಂಭವಿಸಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.

ಇರಾನ್​​ನಿಂದ ಅಮೆರಿಕಕ್ಕೆ ಭಯಾನಕ ಮೆಸೇಜ್​​!

TAGGED:Teacher demands student to have physical relationship..!
Share This Article
Facebook Twitter Copy Link Print
Previous Article ಜಮೀರ್ ಅಹ್ಮದ್ ಖಾನ್​ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ
Next Article ಕೇವಲ 3.5 ಲಕ್ಷ ಗಳಿಸಿದ ಮೋಹನ್​​ಲಾಲ್​ ಸಿನಿಮಾ

Popular Posts

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?