https://youtube.com/shorts/mbdlQ4YCz3Y?si=RXILmDB-TWH7l87U
newsics.com
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ (ಏ.12-ಭಾನುವಾರ) ಸಿಲಿಗುರಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮಗಾಗಿ ಒದಗಿಸಲಾಗಿದ್ದ ಬಿಗಿ ಭದ್ರತೆಯ ಕಾರಣದಿಂದಾಗಿ ನವಜೋಡಿಯ ವಿವಾಹ ಸಮಾರಂಭಕ್ಕೆ ಅಡ್ಡಿಯಾಗಿದ್ದಕ್ಕೆ ಕ್ಷಮೆ ಕೋರಿದ್ದಾರೆ. ತಾವೇ ಖುದ್ದಾಗಿ ನವವಿವಾಹಿತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಇಬ್ಬರಿಗೂ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದರು.
ಇಲ್ಲಿನ ಮೇಫೇರ್ ಟೀ ರೆಸಾರ್ಟ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮದುವೆ ಸಮಾರಂಭಕ್ಕೆ, ಪ್ರಧಾನಿ ಮೋದಿ ಅವರ ಭದ್ರತಾ ಅಧಿಕಾರಿಗಳು ಸೀಮಿತ ಅವಕಾಶ ಒದಗಿಸಿದರು. ಇದಕ್ಕೆ ನವವಿವಾಹಿತರ ಕುಟುಂಬಸ್ಥರು ಮುಕ್ತ ಮನಸ್ಸಿನಿಂದ ಸಮ್ಮತಿ ಸೂಚಿಸಿದ್ದರು.
ನವವಿವಾಹಿತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ತಮ್ಮ ಭದ್ರತಾ ಕಾರಣಗಳಿಗಾಗಿ ಮದುವೆ ಸಮಾರಂಭಕ್ಕೆ ಅಡಚಣೆಯುಂಟಾಗಿದ್ದಕ್ಕೆ ಕ್ಷಮೆ ಕೋರಿದರು. ಇದಕ್ಕೆ ನವಜೋಡಿ ಮತ್ತು ಅವರ ಕುಟುಂಬಸ್ಥರು ತಮಗೆ ಯಾವ ಅಡಚಣೆಯೂ ಉಂಟಾಗಿಲ್ಲ ಎಂದು ಹೇಳಿದ್ದಲ್ಲದೇ, ಪ್ರಧಾನಿ ಅವರ ಭದ್ರತೆ ತಮಗೆ ಅತ್ಯಂತ ಮುಖ್ಯ ಎಂದು ಹೇಳಿದರು.
ಇದಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವಜೋಡಿಗೆ ತುಂಬು ಹೃದಯದಿಂದ ಹಾರೈಸಿದರು. ತಮ್ಮ ಮದುವೆಗೆ ಪ್ರಧಾನಿ ಮೋದಿ ಅವರ ಆಶೀರ್ವಾದ ದೊರೆತಿದ್ದಕ್ಕೆ, ನವಜೋಡಿ ತುಂಬಾ ಸಂತಸ ವ್ಯಕ್ತಪಡಿಸಿದರು.
ಈ ಕುರಿತು ಬಿಜೆಪಿಯ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಪ್ರಧಾನಿ ಮೋದಿ ಅವರ ಸರಳತೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.