https://youtube.com/shorts/w77Qj39UtDA?si=G-t7V0TrkmzYuWQ5
newsics.com
ತಾಯಿಯೊಬ್ಬಳು ಮೂಢನಂಬಿಕೆಗೆ ಬಲಿಯಾಗಿ ತನ್ನ ಸ್ವಂತ ಮಗಳನ್ನೇ ಬಲಿ ಕೊಟ್ಟಿರುವ ಆಘಾತಕಾರಿ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. 35 ವರ್ಷದ ಮಹಿಳೆಯೊಬ್ಬಳು ವಾಮಾಚಾರದ ಗುಂಗಿನಲ್ಲಿ ತನ್ನ ಹದಿಹರೆಯದ ಮಗಳನ್ನೇ ಧಾರ್ಮಿಕ ವಿಧಿಯ ಹೆಸರಿನಲ್ಲಿ ಹತ್ಯೆ ಮಾಡಿದ್ದಾಳೆ.
ಮಾರ್ಚ್ 24, 2026ರಂದು ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ 13 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಮರುದಿನ ಬೆಳಗ್ಗೆ ಸ್ಥಳೀಯ ಶಾಲೆಯ ಹಿಂಭಾಗದ ಬಿದಿರಿನ ಪೊದೆಯ ಬಳಿ ಆಕೆಯ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಲಕಿಯ ತಲೆಗೆ ಕಲ್ಲಿನಿಂದ ಜಜ್ಜಲಾಗಿತ್ತು ಮತ್ತು ದೇಹದ ಮೇಲೆ ಗಂಭೀರ ಗಾಯಗಳಾಗಿದ್ದವು.
ಬಾಲಕಿಯ ತಾಯಿ ರೇಶ್ಮಿ ದೇವಿಗೆ ತನ್ನ ಕಿರಿಯ ಮಗನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಅದು ವಾಸಿ ಆಗಿರಲಿಲ್ಲ. ಇದರಿಂದ ಕುಟುಂಬದ ಸಮಸ್ಯೆಗಳೂ ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಶಾಂತಿ ದೇವಿ (ಮಂತ್ರವಾದಿ ಮಹಿಳೆ) ಬಳಿ ಹೋಗಿದ್ದಳು. ಅಲ್ಲಿ ಪ್ರಶ್ನೆ ಮಾಡಿದಾಗ ಒಬ್ಬ ಕನ್ಯಾ ಹುಡುಗಿಯನ್ನು ಬಲಿ ಕೊಟ್ಟರೆ ಮಾತ್ರ ನಿನ್ನ ಮಗನ ಕಾಯಿಲೆ ವಾಸಿಯಾಗುತ್ತದೆ. ಸಮಸ್ಯೆಗಳೆಲ್ಲವೂ ದೂರ ಆಗಲಿದೆ ಎಂದು ನಂಬಿಸಿದ್ದಳು. ಇದನ್ನು ನಂಬಿದ ತಾಯಿ ರೇಶ್ಮಿ ದೇವಿ, ತನ್ನ ಲವರ್ ಭೀಮ್ ರಾಮ್ ಮತ್ತು ತಾಂತ್ರಿಕ ಮಹಿಳೆ ಶಾಂತಿ ದೇವಿ ಜೊತೆ ಸೇರಿ ಸ್ವಂತ ಮಗಳನ್ನೇ ಬಲಿ ಕೊಟ್ಟಿದ್ದಾಳೆ.