https://youtube.com/shorts/7-1-Ue0Sh8o?si=IPl4cpVzjeJG3YdO
newsics.com
ಚಿತ್ತೂರು : ನಿಂತಿದ್ದ APSRTC ಬಸ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಬಳಿ ನಡೆದಿದೆ.
ಶ್ರೀಧರ್ ರಾವ್, ಪತ್ನಿ ಲಕ್ಷ್ಮಿ ಮತ್ತು ನಾಲ್ಕು ವರ್ಷದ ಮಗಳು ಆದ್ವಿಕಾ ಸಾವು ಮೃತ ದುರ್ದೈವಿಗಳಾಗಿದ್ದಾರೆ. ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ವೆಂಕಟೇಶ್ವರನ ದರ್ಶನ ಮಾಡಲು ಬೆಂಗಳೂರಿಂದ ತಿರುಪತಿಗೆ ಹೊರಟ್ಟಿದಿದ್ದಾಗ ಈ ಅಪಘಾತ ನಡೆದಿದೆ.
ಮೃತರು ಮೂಲತಃ ಆಂದ್ರದ ವಾರಂಗಲ್ ನಿವಾಸಿಗಳಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ರು ಎಂಬ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ಬಂಗಾರುಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಕೆಳಗೆ ಕಾರು ಸಿಲುಕಿದ್ದು, ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.
https://www.newsics.com/2026/03/28/i-dont-need-a-man-malaika-arora-clarifies-dating-rumors/