Subscribe ನ್ಯೂಸಿಕ್ಸ್ ಕನ್ನಡ
newsics.com
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ನಂತರ ಸ್ಯಾಂಡಲ್ವುಡ್ನಿಂದ ಶುಭಾಶಯಗಳ ಕೊರತೆ ಚರ್ಚೆಗೆ ಕಾರಣವಾಗಿದೆ.
ಕೆಲವರು ಯಶ್ ಹಾಗೂ ರಶ್ಮಿಕಾ ನಡುವಿನ ‘ಶೋಆಫ್ ಪರ್ಸನ್’ ಎನ್ನುವ ವಿವಾದವೇ ಕಾರಣ ಎನ್ನಲಾಗಿದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಕೆಜಿಎಫ್ ಸ್ಟಾರ್ ಯಶ್ ನಡುವಿನ ವಿವಾದವು 2017ರಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಟಿವಿ ಇಂಟರ್ವ್ಯೂನಲ್ಲಿ ರಶ್ಮಿಕಾ ಅವರು ಯಶ್ ಅವರನ್ನು “ಮಿಸ್ಟರ್ ಶೋ ಆಫ್” (ಹೆಚ್ಚು ಬಡಾಯಿ ಕೊಚ್ಚಿಕೊಳ್ಳುವವರು) ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿತ್ತು.
ಖಾಸಗಿ ವಾಹಿನಿಯೊಂದರ ‘ರ್ಯಾಪಿಡ್ ಫೈರ್’ ಸುತ್ತಿನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ “ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಶೋ ಆಫ್ ಮಾಡುವವರು ಯಾರು?” ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ರಶ್ಮಿಕಾ ಅವರು ಯಶ್ ಹೆಸರನ್ನು ಹೇಳಿದ್ದರು.
ವಾಸ್ತವವಾಗಿ ಈ ಸಂದರ್ಶನ ಹಳೆಯದಾಗಿತ್ತು. ಆದರೆ ಅದು ಮರುಪ್ರಸಾರವಾದಾಗ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ರಶ್ಮಿಕಾ ಅವರ ಮಾತಿನಿಂದ ಆಕ್ರೋಶಗೊಂಡ ಅಭಿಮಾನಿಗಳು ಅವರನ್ನು ‘ಅಹಂಕಾರಿ’ ಎಂದು ಕರೆದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ಮಾಡಿದ್ದರು.
ರಶ್ಮಿಕಾ ನೀಡಿದ ಸ್ಪಷ್ಟನೆ ಮತ್ತು ಕ್ಷಮೆ
ವಿವಾದ ತಾರಕಕ್ಕೇರುತ್ತಿದ್ದಂತೆ ರಶ್ಮಿಕಾ ಮಂದಣ್ಣ ಅವರು ಸ್ಪಷ್ಟನೆ ನೀಡಿದರು. “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಶ್ ಅವರ ಬಗ್ಗೆ ನನಗೆ ಯಾವುದೇ ಅಗೌರವವಿಲ್ಲ, ಅವರ ಕೆಲಸದ ಬಗ್ಗೆ ನನಗೆ ಅಪಾರವಾದ ಅಭಿಮಾನವಿದೆ” ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದರು.
ಈ ವಿವಾದದ ಬಗ್ಗೆ ಯಶ್ ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಿದ್ದರು. “ನನಗೆ ರಶ್ಮಿಕಾ ವೈಯಕ್ತಿಕವಾಗಿ ತಿಳಿದಿಲ್ಲ. ಆದರೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಅವರಿಗಿದೆ” ಎಂದು ಹೇಳಿದ್ದರು. ಅಲ್ಲದೆ, ಇಂತಹ ಸಣ್ಣ ವಿಷಯಗಳನ್ನು ನಿರ್ಲಕ್ಷಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡುವ ಮೂಲಕ ವಿವಾದಕ್ಕೆ ಪೂರ್ಣವಿರಾಮ ಹಾಕಿದ್ದರು.