https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು : ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಅವರ ಸಾವಿನ ಸುತ್ತ ಅನುಮಾನದ ಹುತ್ತ ಕಾಡುತ್ತಿದೆ. ಸದ್ಯ ಪ್ರಕರಣವನ್ನು SIT ತನಿಖೆ ನಡೆಸುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿಯೇ SIT ತನಿಖೆಯ ಮಾಹಿತಿ ಬಹಿರಂಗವಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ರಾಯ್ ಸಾವಿನ ಬಗ್ಗೆ ಸ್ಪೋಟಕ ಮಾಹಿತಿಯೊಂದು ಕೇಳಿಬರುತ್ತಿದ್ದು, ಸಂಪೂರ್ಣ ತನಿಖೆಗೆ ಟ್ವಿಸ್ಟ್ ಸಿಕ್ಕಿದೆ.
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥರಾಗಿದ್ದ ರಾಯ್ ಅವರ ಸಾವಿಗೆ ಬರೋಬ್ಬರಿ 500 ಕೋಟಿ ರೂಪಾಯಿ ಹವಾಲಾ ವ್ಯವಹಾರ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.
ಹವಾಲಾ ಹಣದ ಲೆಕ್ಕ ನೀಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರಾಯ್, ಐಟಿ ಇಲಾಖೆಯ ತನಿಖೆಯ ಒತ್ತಡಕ್ಕೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. 500 ಕೋಟಿ ಲೆಕ್ಕವನ್ನು ಐಟಿ ಅಧಿಕಾರಿಗಳು ಕೇಳಿದ್ದರು. ಆದರೆ ಇದಕ್ಕೆ ಸರಿಯಾದ ಲೆಕ್ಕವಿಲ್ಲದೇ ಐಟಿ ಅಧಿಕಾರಿಗಳಿಗೆ ಲೆಕ್ಕ ನೀಡಲಾಗದೇ ರಾಯ್ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗುತ್ತಿದೆ. ಜೊತೆಗೆ ರಾಯ್ ಮಾನಸಿಕ ಖಿನ್ನತೆಗಾಗಿ ಅನೇಕ ಕೌನ್ಸಲಿಂಗ್ಗೆ ಸಹ ಒಳಗಾಗುತ್ತಿದ್ದರಂತೆ. ಅಲ್ಲದೇ ವಿಚಾರಣೆ ಹಿಂದಿನ ದಿನ ರಾಯ್ ಮಾನಸಿಕ ಖಿನ್ನತೆಗೆ ಮಾತ್ರೆ ಸೇವಿಸಿದ್ದರು.
ಆದರೆ ವಿಚಾರಣೆ ದಿನ ಅವರಿಗೆ ತಮ್ಮ 500 ಕೋಟಿ ಅಕ್ರಮ ಹಣದ ಬಗ್ಗೆ ಲೆಕ್ಕ ನೀಡಲಾಗದೇ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾಹಿತಿ ಇದೀಗ ಕೇಳಿಬರುತ್ತಿದೆ. ಅಲ್ಲದೇ ರಾಯ್ ತಮ್ಮ ಆಫೀಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಾವು ತಂಗಿದ್ದ ಖಾಸಗಿ ಹೋಟೇಲ್ನಲ್ಲಿ ಸಹ ಆತ್ಮಹ್ತಯೆಗೆ ಪ್ರಯತ್ನಿಸಿರಬಹುದು ಎನ್ನಲಾಗುತ್ತಿದೆ. ಏಕೆಂದರೆ ಹೋಟೆಲ್ ರೂಮ್ನಲ್ಲಿ ಸಹ ಜೀವಂತ ಗುಂಡುಗಳು ಸಿಕ್ಕಿದೆ ಎನ್ನಲಾಗಿದೆ.
https://www.newsics.com/2026/02/26/egg-donation-scam-in-bangalore-hospitals/