Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಆ ಸೂಪರ್‌ಸ್ಟಾರ್ ನ ಬೇಡಿಕೆಯನ್ನು ಈಡೇರಿಸದ್ದಕ್ಕೆ ತನ್ನ ವೃತ್ತಿಜೀವನವನ್ನು ಹಾಳುಮಾಡಿದ್ರು – ಶಕ್ತಿಮಾನ್ ನಟಿ ಆರೋಪ
ದೇಶಪ್ರಮುಖಮನರಂಜನೆ

ಆ ಸೂಪರ್‌ಸ್ಟಾರ್ ನ ಬೇಡಿಕೆಯನ್ನು ಈಡೇರಿಸದ್ದಕ್ಕೆ ತನ್ನ ವೃತ್ತಿಜೀವನವನ್ನು ಹಾಳುಮಾಡಿದ್ರು – ಶಕ್ತಿಮಾನ್ ನಟಿ ಆರೋಪ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಸಿನಿಮಾ ಹಾಗೂ ಕಿರುತೆರೆ ಎರಡೂ ಗ್ಲಾಮರಸ್ ಲೋಕ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿಯೇ ಕಾಣಿಸುತ್ತೆ. ಆದರೆ, ಒಳಗೆ ಹೋದಾಗಲೇ ಅಸಲಿ ಸತ್ಯ ಗೊತ್ತಾಗುತ್ತೆ. ಕೆಲವರಿಗೆ ಈ ಗ್ಲಾಮರ್ ಲೋಕ ಚೆನ್ನಾಗಿ ಕೈ ಹಿಡಿಯುತ್ತೆ. ಇನ್ನು ಕೆಲವರಿಗೆ ನರಕ ಅಂತ ಅನಿದ್ದೂ ಇದೆ. ಮತ್ತೆ ಕೆಲವರಿಗೆ ಕಹಿ ಅನುಭವಗಳು ಆಗಿದ್ದೂ ಇದೆ. ವೈಷ್ಣವಿ ಮಹಂತ್ ಅವರಿಗೂ ಇಂತಹದ್ದೇ ಕೆಟ್ಟ ಅನುಭವ ಆಗಿದೆ.

ಚಿತ್ರರಂಗ ಅಂದ್ಮೇಲೆ ಅಲ್ಲಿ ಮಹಿಳೆಯರಿಗೆ ‘ಕಾಸ್ಟಿಂಗ್ ಕೌಚ್’ ಅನುಭವ ಆಗಿರುತ್ತೆ. ಇವರಿಗೆ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಮೀಟೂ ಅಭಿಯಾನ ಶುರುವಾದಾಗ ಇಂತಹದ ಸಾಕಷ್ಟು ವರದಿಯಾಗಿತ್ತು. ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣುವ ಸಿನಿಮಾ ಮಂದಿಯ ಅಸಲಿ ಮುಖ ಹೊರಬಿದ್ದಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಶಕ್ತಿಮಾನ್’ ನಟಿ ವೈಷ್ಣವಿ ಮಹಂತ್ ಕೂಡ ಇಂತಹದ್ದೇ ಒಂದು ಅನುಭವ ಹಂಚಿಕೊಂಡಿದ್ದಾರೆ.

ಸೂಪರ್‌ಸ್ಟಾರ್ ಒಬ್ಬರು ಬೇಡಿಕೆಯನ್ನು ಈಡೇರಿಸದ ಕಾರಣ ತನ್ನ ವೃತ್ತಿಜೀವನವನ್ನು ಹಾಳುಮಾಡಿದ್ರು ಎಂದು ಅವರು ಆರೋಪಿಸಿದ್ದಾರೆ. ಜನಪ್ರಿಯ ಧಾರಾವಾಹಿ ‘ಶಕ್ತಿಮಾನ್’ನಲ್ಲಿ ‘ಗೀತಾ ವಿಶ್ವಾಸ್’ ಪಾತ್ರದ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದ ನಟಿಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಇತ್ತೀಚೆಗೆ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವೈಷ್ಣವಿ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತಾಡಿದ್ದರು.

 

ಒಂದು ದಿನ ಸಂಜೆ ಹೋಟೆಲ್‌ನಲ್ಲಿ ಪುರುಷರೇ ಇದ್ದರು. ಅಲ್ಲಿಗೆ ಒಬ್ಬಳೇ ಬರಲು ಹೇಳಿದರು. ಜೊತೆಗೆ ಮದ್ಯಪಾನದ ಪ್ರಸ್ತಾಪವೂ ಮಾಡಿದ್ದರು. ನನಗೆ ಅದು ಸರಿ ಎನಿಸಲಿಲ್ಲ. ಈ ಕಾರಣಕ್ಕೆ ನಾನು ಹೋಗಲಿಲ್ಲ. ಅಮ್ಮ ಯಾವಾಗಲೂ ನನ್ನ ಜೊತೆ ಇರೋದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮುಂದಿನ ಶೆಡ್ಯೂಲ್ ಫೈನಲ್ ಮಾಡಿದಾಗ ನನ್ನ ಪಾಸ್‌ಪೋರ್ಟ್ ರೆಡಿಯಾಗಿತ್ತು. ಆದರೆ ತಾಯಿಯನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದರು. ಎಂದು ಹೇಳಿದ್ದಾರೆ. ಇಲ್ಲಿಗೆ ಮ್ಯಾಟರ್ ಮುಗಿದಿರಲಿಲ್ಲ. ಸಿನಿಮಾದ ನಾಯಕನಿಗೆ ನನ್ನ ಮೇಲೆ ಕಣ್ಣಿತ್ತು. ನಾನು ಅವರ ಪ್ರಪೋಸಲ್ ತಿರಸ್ಕರಿಸಿದಾಗ ಆ ಸೂಪರ್‌ಸ್ಟಾರ್ ನನ್ನ ಮೇಲೆ ಸೇಡು ತೀರಿಸಿಕೊಂಡ. ಹೀರೋ, ನಿರ್ಮಾಪಕ ಮತ್ತು ನಿರ್ದೇಶಕ ಒಟ್ಟಾಗಿ ಸೇರಿಕೊಂಡು ಆ ಸಿನಿಮಾದಿಂದ ಹೊರಹಾಕಿದರು ಎಂದು ನಟಿ ವೈಷ್ಣವಿ ಹೇಳಿದ್ದು, ಅವರು ಕೊಟ್ಟ ಹೇಳಿಕೆಗಳು ವೈರಲ್ ಆಗುತ್ತಿವೆ. ಆದರೆ, ವೈಷ್ಣವಿ ಆ ಪ್ರಾಜೆಕ್ಟ್‌ನಿಂದ ಹೊರಹಾಕಿದ ಆ ಹೀರೋ ಯಾರು? ಅನ್ನೋದನ್ನು ರಿವೀಲ್ ಮಾಡಿಲ್ಲ.

https://www.newsics.com/2026/02/20/this-lonely-baby-monkey-has-a-doll-as-his-family/

 

 

TAGGED:Shaktimaan actress accuses superstar of ruining her career for not fulfilling his demands
Share This Article
Facebook Twitter Copy Link Print
Previous Article ಗೊಂಬೆಯೇ ಈ ಕೋತಿಮರಿಯ ಜೀವ, ಬೇರೆ ಕೋತಿಗಳಿಂದ ಭಾರೀ ಕಾಟ! -ವಿಡಿಯೋ ನೋಡಿ
Next Article ಇನ್ಮುಂದೆ ಕರ್ನಾಟಕದ ದೇಗುಲಗಳಲ್ಲಿ ಶೂಟಿಂಗ್‌ಗೆ ಬ್ರೇಕ್‌ !

Popular Posts

Anahat Singh World Junior Squash ವಿಶ್ವ ಜೂನಿಯರ್ ಸ್ಕ್ವಾಶ್‌ನಲ್ಲಿ ಇತಿಹಾಸ ಬರೆದ ಅನಾಹತ್ ಸಿಂಗ್: ಚಿನ್ನ ಗೆದ್ದ ಮೊದಲ ಭಾರತೀಯ

1 Min Read

Astrology ವಾರದ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ಸಮಗ್ರ ಫಲಿತಾಂಶಗಳು ಇಲ್ಲಿವೆ

3 Min Read

Lok Sabha ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಕಡಿವಾಣ; ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ’ ಮಂಡನೆ

1 Min Read

Prallhad Joshi ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

1 Min Read

You Might Also Like

ಪ್ರಮುಖಆರೋಗ್ಯ

Cholesterol In Middle Age ವಯಸ್ಸಾದಂತೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವೇನು? ಆರೋಗ್ಯ ರಕ್ಷಣೆಗೆ ಇಲ್ಲಿದೆ ಪ್ರಮುಖ ಮಾಹಿತಿ

2 Min Read
ಪ್ರಮುಖವಿದೇಶ

Divorce Case ಜಗತ್ತನ್ನೇ ಬೆಚ್ಚಿಬೀಳಿಸಿದ ವಿಚ್ಛೇದನ; ಮಾಜಿ ಪತ್ನಿಗೆ 6,245 ಕೋಟಿ ರೂ. ನೀಡಲು ಉದ್ಯಮಿಗೆ ಹೈಕೋರ್ಟ್ ಆದೇಶ

1 Min Read
ಪ್ರಮುಖದೇಶ

Sonam Wangchuk ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯಗೊಳಿಸಲು ಕಸರತ್ತು ನಡೆಸಿದವರು ಯಾರು? ಇಲ್ಲಿದೆ ಅಸಲಿ ಕಥೆ

2 Min Read
ಪ್ರಮುಖಕರ್ನಾಟಕ

Rain Alert ಕರ್ನಾಟಕದಲ್ಲಿ ಮುಂದಿನ 7 ದಿನಗಳ ಕಾಲ ವರುಣನ ಆರ್ಭಟ: ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?