https://youtube.com/shorts/1QBsT4fM7Oc?si=2UevBtM7l5058Pmp
Subscribe ನ್ಯೂಸಿಕ್ಸ್ ಕನ್ನಡ
newsics.com
ಬಾಂಗ್ಲಾದೇಶದ ಸಂಸತ್ ಚುನಾವಣೆಗೂ ಮುನ್ನ, ಸೋಮವಾರ ತಡರಾತ್ರಿ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಉದ್ಯಮಿಯೊಬ್ಬರನ್ನು ಅವರ ಅಂಗಡಿಯೊಳಗೆ ಇರಿದು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸುಶೇನ್ ಚಂದ್ರ ಶೇಖರ್ (62) ಎಂದು ಗುರುತಿಸಲಾಗಿದೆ. ಸೌತ್ಕಂಡ ಗ್ರಾಮದ ನಿವಾಸಿಯಾಗಿದ್ದ ಅವರು ತ್ರಿಶಾಲ್ ಉಪಜಿಲ್ಲಾದ ಬೋಗರ್ ಬಜಾರ್ ಛೇದಕದಲ್ಲಿ ಅಕ್ಕಿ ವ್ಯಾಪಾರಿ ಮತ್ತು ‘ಮೆಸರ್ಸ್ ಭಾಯ್ ಭಾಯ್ ಎಂಟರ್ಪ್ರೈಸ್’ ಮಾಲೀಕರಾಗಿ ಕೆಲಸ ಮಾಡುತ್ತಿದ್ದರು.
ಸುಶೇನ್ ಚಂದ್ರ ಸರ್ಕಾರ್ ಅಕ್ಕಿ ವ್ಯಾಪಾರಿಯಾಗಿದ್ದು, ಬೋಗರ್ ಬಜಾರ್ನಲ್ಲಿ “ಭಾಯ್ ಭಾಯ್ ಎಂಟರ್ಪ್ರೈಸ್” ಅನ್ನು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಸುಮಾರು 11 ಗಂಟೆ ವೇಳೆ ಮಾರುಕಟ್ಟೆ ಪ್ರದೇಶದಲ್ಲಿ ಅಪರಿಚಿತ ದಾಳಿಕೋರರು ಹರಿತವಾದ ಆಯುಧಗಳಿಂದ ಹೊಡೆದು ಕೊಂದು ಶವವನ್ನು ಅಂಗಡಿಯೊಳಗೆ ಬಿಟ್ಟು ಬಾಗಿಲು ಹಾಕಿ ಮುಚ್ಚಿದ್ದಾರೆ. ಅಲ್ಲದೆ ಅಂಗಡಿಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದು ಪರಾರಿಯಾಗಿದ್ದಾರೆ.