https://youtube.com/shorts/2Z4I0oFUbOQ?si=GQh11tLqq7tz2UFd
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾನ್ಪಿಡೆಂಟ್ ಗ್ರೂಪ್ ಕಂಪನಿಯ ಅಧ್ಯಕ್ಷ ಸಿ.ಜೆ. ರಾಯ್ ಅವರು ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಸುಮಾರು 9 ಪುಟಗಳಷ್ಟು ಇರುವ ಈ ಡೆತ್ ನೋಟ್ ನಲ್ಲಿ ಅವರು ಆತ್ಮಹತ್ಯೆ ಕುರಿತ ವಿವರಗಳು ಈಗ ಹೊರಬಿದ್ದಿವೆ.
ಈ ಡೆತ್ ನೋಟ್ನಲ್ಲಿ ಅವರ ಆತ್ಮಹತ್ಯೆಗೆ ಕಾರಣವಾದ ಹಲವು ಅಂಶಗಳು ಅಡಗಿವೆ. ಪೊಲೀಸರ ತನಿಖೆಗೆ ಈ ಡೆತ್ ನೋಟ್ ಸಹಕಾರಿಯಾಗಿದೆ.
ಕುಟುಂಬಸ್ಥರಿಗೆ ಕ್ಷಮೆ ಯಾಚನೆ
ಸಿ.ಜೆ. ರಾಯ್ ಅವರು ತಮ್ಮ ಡೆತ್ ನೋಟ್ನಲ್ಲಿ ತಮ್ಮ ಕುಟುಂಬಸ್ಥರಿಗೆ ಕ್ಷಮೆಯಾಚಿಸಿದ್ದಾರೆ. “ನಾನು ತೀವ್ರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ” ಎಂದು ಅವರು ತಮ್ಮ ಕುಟುಂಬಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ತಮಗೆ ಯಾರಿಂದ ಎಷ್ಟು ಹಣ ಬರಬೇಕಿದೆ ಎಂಬ ವಿವರಗಳನ್ನು ಡೆತ್ ನೋಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ತಮ್ಮ ಸಾವಿನ ನಂತರ ತಮ್ಮ ವ್ಯವಹಾರವನ್ನು ಯಾರು ನೋಡಿಕೊಳ್ಳಬೇಕು, ತಮ್ಮ ಉದ್ಯಮದ ಉತ್ತರಾಧಿಕಾರಿಗಳು ಯಾರಾಗಬೇಕು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
‘ಕಾನ್ಪಿಡೆಂಟ್ ಗ್ರೂಪ್’ನೊಂದಿಗೆ ಹಿಂದಿನಿಂದಲೂ ಕೆಲಸ ಮಾಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ಅವರನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕು. ಅವರೆಲ್ಲಾ ನಂಬಿಕಸ್ಥ ವ್ಯಕ್ತಿಗಳು ಎಂದು ಸಿ.ಜೆ. ರಾಯ್ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಸಿ.ಜೆ. ರಾಯ್ ಅವರ ಸಾವಿನ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಈಗ ಡೆತ್ ನೋಟ್ ಅನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಇದರ ಆಧಾರದ ಮೇಲೆ, ಅವರು ಸಿ.ಜೆ. ರಾಯ್ ಅವರ ಪತ್ನಿ ಮತ್ತು ಮಕ್ಕಳಿಂದ ಹೇಳಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಹಿಂದೆಯೂ ಕೆಲವೊಮ್ಮೆ ತಮಗೆ ಸಾವು ಎದುರಾದರೆ, ತಾವು ಯಾರಿಗೆ ಎಷ್ಟು ಹಣ ಕೊಟ್ಟಿದ್ದೇನೆ” ಎಂಬ ಮಾಹಿತಿಯನ್ನು ಸಿ.ಜೆ. ರಾಯ್ ತಮ್ಮ ಪತ್ನಿಗೆ ನೀಡಿದ್ದರಂತೆ. ಇತ್ತೀಚೆಗೆ ಒಂದು ಯೂಟ್ಯೂಬ್ ಸಂದರ್ಶನದಲ್ಲೂ ಅವರು ಈ ವಿಷಯವನ್ನು ಹೇಳಿಕೊಂಡಿದ್ದರು. ಹೀಗಾಗಿ, ಸಿ.ಜೆ. ರಾಯ್ ಅವರ ಹಣಕಾಸಿನ ವಿವರಗಳು ಮತ್ತು ಬ್ಯುಸಿನೆಸ್ ಸೀಕ್ರೆಟ್ ಗಳು ಅವರ ಪತ್ನಿಗೆ ಚೆನ್ನಾಗಿ ತಿಳಿದಿವೆ. ಅಂತ್ಯಸಂಸ್ಕಾರ ಮುಗಿದ ಬಳಿಕ, ಸಿ.ಜೆ. ರಾಯ್ ಅವರ ಪತ್ನಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಎಸ್ಐಟಿ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಈ ಪ್ರಕರಣದ ತನಿಖೆಯನ್ನು ಎಸ್ಐಟಿ ಮುಖ್ಯಸ್ಥ ವಂಶಿಕೃಷ್ಣ ಮತ್ತು ಡಿಸಿಪಿ ಲೋಕೇಶ್ ಜಗಲಾಸರ್ ಅವರು ನಡೆಸುತ್ತಿದ್ದಾರೆ