https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ಬಾಸ್ ಸೀಸನ್ 12 ಗೆದ್ದು ಐತಿಹಾಸಿಕ ದಾಖಲೆ ಬರೆದ ಗಿಲ್ಲಿ ನಟನಿಗೆ ರಾಜಕೀಯ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿತ್ತು, ಇದು ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು. ಸದ್ಯ ಇದರ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.ಅದರಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಿಲ್ಲಿನಟನನ್ನು ಅಭಿನಂದಿಸಿದ ಪರಿ ನೋಡಿ ಗಿಲ್ಲಿನಟ ಕಾಂಗ್ರೆಸ್ಗೆ ಸಪೋರ್ಟ್ ಮಾಡ್ತಾರೆ, ಕಾಂಗ್ರೆಸ್ ಸೇರುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ಈಗ ಗಿಲ್ಲಿಯವರಿಗೆ ಪ್ರಶ್ನೆ ಎದುರಾಗಿದೆ.
ಇಲ್ಲಪ್ಪಾ, ಹಾಗೇನೂ ಇಲ್ಲ. ಸದ್ಯ ಅಂಥ ಯೋಚನೆಗಳೂ ಇಲ್ಲ. ನನಗೆ ಕಾಂಗ್ರೆಸ್ನವರು ಮಾತ್ರವಲ್ಲದೇ, ಎಲ್ಲಾ ಪಕ್ಷದವರೂ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆ ನೋಡಿದ್ರೆ ಮೊದಲು ವಿಷ್ ಮಾಡಿದ್ದೇ ಎಚ್.ಡಿ.ಕುಮಾರಸ್ವಾಮಿ ಅವರು. ಅಷ್ಟೇ ಅಲ್ಲದೇ, ಬಿಜೆಪಿಯ ಹಲವು ರಾಜಕಾರಣಿಗಳೂ ವಿಷ್ ಮಾಡಿದ್ದಾರೆ, ಕಾಂಗ್ರೆಸ್ಸಿನವರೂ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲರೂ ಜಾತಿ, ಪಕ್ಷ ಬೇಧ ಮರೆತು ನನಗೆ ಸಪೋರ್ಟ್ ಮಾಡಿದ್ದಾರೆ. ಯಾವುದೋ ಒಂದು ಪಕ್ಷಕ್ಕೆ ಸಪೋರ್ಟ್, ರಾಜಕಾರಣ… ಇವೆಲ್ಲಾ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆಕೆಲವೊಂದು ಜಾತಿ ಲೆಕ್ಕಾಚಾರ, ಪಕ್ಷದ ಲೆಕ್ಕಾಚಾರ ಎಲ್ಲವನ್ನೂ ಮೀರಿ ಗಿಲ್ಲಿ ನಟನಿಗೆ 45 ಕೋಟಿಗೂ ಅಧಿಕ ವೋಟ್ ಬಂದಿದ್ದು ನೋಡಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ.
ಪಿಎಸ್ಐ ನೇಮಕಾತಿ ಕೇಸ್: ಮುಖ್ಯ ಆರೋಪಿಗಳ ₹1.53 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು