Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಆದರೆ, ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಬಿಗ್ ಬಾಸ್ ಶೋ ನಿರೂಪಕರಾದ ಕಿಚ್ಚ ಸುದೀಪ್ ಅವರನ್ನು ಮನಸ್ಸಿಗೆ ಬಂದಂತೆ ಬೈಯುತ್ತಿದ್ದಾರೆ.
ಯೆಸ್, ಗ್ರಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ಗೆದ್ದಿರಬಹುದು. ಆದರೆ, ಎಲ್ಲೋ ಆಗೊಮ್ಮೆ ಈಗೊಮ್ಮೆ ಸಮಯಕ್ಕೆ ಸೂಕ್ತವಾಗಿ ಕಿಚ್ಚ ಸುದೀಪ್ ಅವರು ಅಶ್ವಿನಿಯನ್ನು ಹೊಗಳಿದ್ದಕ್ಕೆ, ರಕ್ಷಿತಾ ಹಾಗೂ ಗಿಲ್ಲಿಯ ಬಗ್ಗೆ ಹೊಗಳಿದೇ ಇದ್ದಿದ್ದಕ್ಕೆ ಕೆಲವರು ಈಗ ಸುದೀಪ್ ಅವರಿಗೆ ಬಾಯಿಗೆ ಬಂದಂತೆ ಮಾತನ್ನಾಡುತ್ತಿದ್ದಾರೆ. ಇನ್ನು , ನಟ ಧ್ರುವಂತ್ ಅವರಿಗೆ ಕೊಟ್ಟ ಚಪ್ಪಾಳೆಯ ಬಗ್ಗೆ ಕೆಲವರು ಕೆಂಡಾಮಂಡಲ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಆಗ-ಈಗ ಎಂಬಂತೆ ತಪ್ಪುಗಳನ್ನು ಮಾಡಿದ್ದಾರೆ, ತಿದ್ದಿಕೊಂಡಿದ್ದಾರೆ. ಆದರೆ ಕೆಲವರು ಹೆಚ್ಚು ಹಾಗೂ ಕೆಲವರು ಕಡಿಮೆ ತಪ್ಪು ಮಾಡಿರಬಹುದು. ಗಿಲ್ಲಿ ವೀಕ್ಷಕರಿಗೆ ಹಚ್ಚು ಮನರಂಜನೆ ಕೊಟ್ಟಿದ್ದಾರೆ. ಆ ಕಾರಣಕ್ಕೆ ಗಿಲ್ಲಿ ಸಹಜವಾಗಿಯೇ ಗೆದ್ದಿದ್ದಾರೆ. ಉಳಿದವರು 2ನೇ, 3ನೇ ಹೀಗೆ ಆಯಾ ಸ್ಥಾನಗಳನ್ನು ಪಡೆಯುತ್ತಾರೆ. ಅದು ಎಲ್ಲಾ ಗೇಮ್ಗಳಿಗೂ ಅನ್ವಯ ಆಗುತ್ತೆ.
ಇನ್ನು ಕಿಚ್ಚ ಸುದೀಪ್ ಅವರು ಮಾಡಿದ್ದರಲ್ಲಿ, ನಡೆದುಕೊಂಡಿದ್ದರಲ್ಲಿ ಅದೇನು ತಪ್ಪಿದೆ. ಅವರೇನೂ ಸ್ವತಂತ್ರವಾಗಿ ಈ ಶೋ ನಡೆಸಿಕೊಡುವುದಿಲ್ಲ. ಅವರಿಗೂ ಕೆಲವು ಸೂಚನೆ-ಸಲಹೆಗಳನ್ನು ಕೊಡಲಾಗುತ್ತದೆ. ಅದನ್ನು ಅವರೂ ಕೂಡ ಫಾಲೋ ಮಾಡಲೇಬೇಕಾಗುತ್ತದೆ. ಹೀಗಿರುವಾಗ ಎಲ್ಲದಕ್ಕೂ ಕಿಚ್ಚ ಸುದೀಪ್ ಅವರೇ ಕಾರಣವಲ್ಲ. ಅಷ್ಟಕ್ಕೂ ಸುದೀಪ್ ಶೋನ ನಿರೂಪಕರಷ್ಟೇ. ಅದನ್ನು ಸಂಪೂರ್ಣವಾಗಿ ನಡೆಸುವ ಕಾಣದ ಕೈಗಳು ಅನೇಕ ಇವೆ.
‘ಕಿಚ್ಚ ಸುದೀಪ್ ಅವರು ಕ್ಲಿಯರ್ ಆಗಿ ಹೇಳಿದ್ದು- ಹೊರಗಡೆ ಕಿತ್ತಾಡುವವರಿಗೆ ಗೆದ್ದವರು ದುಡ್ಡ ಕೊಡಲ್ಲ ಅಂತ.. ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ ಆರಂಭ ಆಗುತ್ತಿದ್ದಂತೆ ಕೆಲವರು ಬಿಗ್ ಬಾಸ್ ಮನೆಗೆ ಕಲ್ಲು ಹೊಡತೀನಿ ಅಂತಾರೆ.. ಇನ್ನೊಬ್ಬರು ಬಿಗ್ ಬಾಸ್ ಮನೆಗೆ ಬೆಂಕಿ ಇಡ್ತೀನಿ ಅಂತ.. ಇನ್ಯಾರೋ ಕಿಚ್ಚ ಸುದೀಪ್ ಅವರು ಮಂಡ್ಯಗೆ ಕಾಲು ಇಡೋ ಹಾಗಿಲ್ಲ ಅಂತ.. ಇನ್ಯಾರೋ ಮುಂದೆ ಬಿಗ್ ಬಾಸ್ ನಡೆಯೋಕೆ ಬಿಡಲ್ಲ ಅಂತ..’ ಯಾವುದೋ ಒಂದು ರಿಯಾಲಿಟಿ ಗೇಮ್ ಶೋವನ್ನು ಇಷ್ಟು ವೈಯಕ್ತಿಕ ಸೋಲು-ಗೆಲುವು ಎಂಬಂತೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಒಬ್ಬ ನಟ ಆದವನು ಫ್ಯಾನ್ಸ್ಗಳು ಕಿತ್ತಾಡ್ತಾ ಇದ್ರೆ ಬುದ್ಧಿ ಹೇಳಬೇಕೋ ಹೊರತೂ ಕಿತ್ತಾಡಿ ಅಂತ ಹೇಳಬಾರದು. ಆದ್ದರಿಂದಲೇ ನಟ ಸುದೀಪ್ ಅವರು ಕಿತ್ತಾಡುತ್ತಿರೋರಿಗೆ ಬುದ್ಧಿ ಹೇಳಿದ್ದಾರೆ. ಧ್ರುವಂತ್ಗೆ ಕೊಟ್ಟ ಚಪ್ಪಾಳೆಯ ಬಗ್ಗೆಯೂ ‘ಈ ಚಪ್ಪಾಳೆನ ಒಬ್ಬ ಪ್ರತಿಭೆಗೆ ಪ್ರೋತ್ಸಾಹ ನೀಡಲು ಕೊಟ್ಟಿದ್ದು ಅಂತ..’ ಕ್ಲಿಯರ್ ಆಗಿ ಹೇಳಿದ್ದಾರೆ. ಆದರೆ ಅದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ಯಾರದೋ ಒಬ್ಬಿಬ್ಬರ ಪರ ಬ್ಯಾಟ್ ಮಾಡುತ್ತಾ, ಟ್ರೋಲ್, ಕಾಮೆಂಟ, ಟೀಕೆ ಮಾಡುತ್ತಿರುವವ ಬಗ್ಗೆ ಹೇಳಲು ಸರಿಯಾದ ಪದ ಯಾವುದು ಎಂದು ಹಲವರು ಮಾತನ್ನಾಡತೊಡಗಿದ್ದಾರೆ.