Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಾಲ್ಕನೇ ದಿನದ ಉತ್ಖನನ ನಡೆಯುತ್ತಿದ್ದು, ಗ್ರಾಮಕ್ಕೆ ಬಂದ ಸ್ವಾಮೀಜಿಯೊಬ್ಬರು ಫುಲ್ ಹೈಡ್ರಾಮಾ ನಡೆಸಿದ ಘಟನೆ ಗದಗನ ಲಕ್ಕುಂಡಿಯಲ್ಲಿ ನಡೆದಿದೆ.
ತಾರಾಣಿಚೆನ್ನಮ್ಮ ವಂಶಸ್ಥ ಎಂದು ಪರಿಚಯಿಸಿಕೊಂಡಿರುವ ಎಸ್. ಸಿ. ಹಿರೇಮಠ ಹೆಸರಿನ ಸ್ವಾಮೀಜಿ, ತಾನೊಬ್ಬ ಪವಾಡ ಪುರುಷ. ತಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಾಮುಂಡಿ ಮೂರ್ತಿ ಇದೆ ಎಂದು ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಡ್ರಾಮಾ ಮಾಡಿದ್ದಾರೆ. ಆರಂಭದಲ್ಲಿ ಎಲ್ಲವನ್ನೂ ತೀವ್ರ ಕುತೂಹಲದಲ್ಲಿ ವೀಕ್ಷಿಸಿದ ಗ್ರಾಮಸ್ಥರು ಬಳಿಕ ಸ್ವಯಂಘೋಷಿತ ಪವಾಡ ಪುರುಷನನ್ನು ಬೆನ್ನಟ್ಟಿ ಓಡಿಸಿದ್ದಾರೆ. ಲಕ್ಕುಂಡಿ ಹಾಗೂ ಚಾಮುಂಡಿ ಇತಿಹಾಸಕ್ಕೂ ಸಂಬಂಧವಿಲ್ಲ. ನಮ್ಮೂರಿಗೆ ಬಂದು ಸುಳ್ಳು ಹೇಳ್ತಿಯಾ ಎಂದು ತರಾಟೆಗೆ ಪಡೆದಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಸ್ವಾಮೀಜಿ ಹಿಂಗಾಲಿನಲ್ಲಿ ಓಡಿದ್ದಾರೆ.
ಮತ್ತೊಂದೆಡೆ ಲಕ್ಕುಂಡಿಯ ಉತ್ಖನನ ಸ್ಥಳದಲ್ಲಿ ಸ್ವಾಮೀಜಿ ಹೈಡ್ರಾಮಾ ಕೂಡ ನಡೆದಿದೆ. ನಾನೊಬ್ಬ ಪವಾಡ ಪುರುಷ ಅಂತ ಹೇಳಿಕೊಂಡು ಬಂದ ಸ್ವಾಮಿ. ನಾನು ನಿಂತ ಜಾಗದಲ್ಲಿ ಸಾವಿರ ಕೆಜಿ ತೂಕದ ಚಾಮುಂಡಿ ಮೂರ್ತಿ ಇದೆ ಎಂದು ಹೇಳಿ ಹೈಡ್ರಾಮಾ ಸೃಷ್ಟಿಸಿದ್ದಾನೆ.
ಬಂಗಾರ, ವಜ್ರ ಖಚಿತ ಮೂರ್ತಿ ಇದೆ, ಹತ್ತು ಅಡಿ ಆಳ ತೆಗೆದ್ರೆ ಮೂರ್ತಿ ಸಿಗುತ್ತೆ ಎಂದು ಹೇಳ್ತಿದ್ದು, ಸ್ವಾಮೀಜಿ ಮಾತು ಕೇಳಿ ಜನರು ಅಚ್ಚರಿ ಹೊರಹಾಕಿದ್ದಾರೆ. ನಾನು ರಾಣಿ ಚನ್ನಮ್ಮಾ ವಂಶಸ್ಥ ಎಂದ ಎಸ್ ಸಿ ಹಿರೇಮಠ ಸ್ವಾಮೀಜಿ ಹೇಳಿಕೊಂಡಿದ್ದು, ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಹೈಡ್ರಾಮಾ ಮಾಡಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಪುತ್ರ ಪ್ರತೀಕ್ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ಘೋಷಣೆ