Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಶೋನಲ್ಲಿ ಸುದೀಪ್ ರಣಹದ್ದಿನ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಅಂತ ರಣಹದ್ದು ಸಂರಕ್ಷಣಾ ಟ್ರಸ್ಟ್, ಅರಣ್ಯ ಇಲಾಖೆಗೆ ದೂರು ನೀಡಿತ್ತು. ಆದ್ರೆ ಇದು ಅಷ್ಟಕ್ಕೆ ಮುಗಿದಿಲ್ಲ. ಅರಣ್ಯ ಇಲಾಖೆ ಬಿಗ್ ಬಾಸ್ ಆಯೋಜಕರಿಗೆ ಈ ಬಗ್ಗೆ ನೊಟೀಸ್ ನೀಡಿದೆ.
ಬಿಗ್ ಬಾಸ್ ಫಿನಾಲೆಗೆ 6 ಜನ ಸ್ಪರ್ಧಿಗಳು ಎಂಟ್ರಿ ಕೊಟ್ಟಿರೋದು ಗೊತ್ತೇ ಇದೆ. ಕೊನೆಯ ದಿನ ಕಿಚ್ಚನಿಗೆ ಮುಖಾಮುಖಿ ಆಗಲಿರೋದು ಈ 6 ಸ್ಪರ್ಧಿಗಳು. ಆದ್ರೆ ಅಚ್ಚರಿಯ ಸನ್ನಿವೇಶದಲ್ಲಿ ಫಿನಾಲೆಗೆ ಮತ್ತೊಬ್ಬರ ಎಂಟ್ರಿ ಖಚಿತವಾಗಿದೆ. ಅದು ಬೇರ್ಯಾರೂ ಅಲ್ಲ ರಣಹದ್ದು.
ಹೌದು ಈ ಸಾರಿ ಬಿಗ್ ಬಾಸ್ ವೀಕೆಂಡ್ ಸಂಚಿಕೆವೊಂದರಲ್ಲಿ ಸುದೀಪ್, ಬೇರೆ ಬೇರೆ ಪ್ರಾಣಿ ಪಕ್ಷಗಳ ಫೋಟೋವನ್ನ ಸ್ಪರ್ಧಿಗಳಿಗೆ ಕೊಟ್ಟಿದ್ರು. ಅದನ್ನ ಇನ್ನೊಬ್ಬ ಸ್ಪರ್ಧಿ ಕೊರಳಿಗೆ ಹಾಕಿ ಆ ಜೀವಿಯ ಸ್ವಭಾವದವರು ಅಂತ ಹೇಳುವ ಟಾಸ್ಕ್ ಅದಾಗಿತ್ತು.
ಬಿಗ್ ಬಾಸ್ ಉಳಿದಿರೋದೇ ಇನ್ನೆರಡು ದಿನ. ಇನ್ನೂ ಸುದೀಪ್ ಬರೋದು ಫಿನಾಲೆಗೇನೆ. ಸೋ ಸುದೀಪ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಅಂದ್ರೆ ಖಂಡಿತ ಫಿನಾಲೆ ವೇದಿಕೆಯಲ್ಲೇ ಕೊಡಬೇಕು. ಸೋ ರಣಹದ್ದಿನ ಬಗ್ಗೆ ಆಡಿರೋ ತಪ್ಪು ಮಾತನ್ನ ಸರಿಪಡಿಸಿ ರಣಹದ್ದುಗಳ ಅಸಲಿ ಗುಣವನ್ನ ವಿವರಿಸೋಕೆ ಫಿನಾಲೆಯಲ್ಲಿ ಮಾತ್ರ ಅವಕಾಶ ಇದೆ.
ಅಲ್ಲಿಗೆ ಈ ಸಾರಿ ಫಿನಾಲೆಯಲ್ಲಿ ಯಾರು ಗೆಲ್ತಾರೆ ಅನ್ನೋವಷ್ಟೇ ಕುತೂಹಲ, ಕಿಚ್ಚ ರಣಹದ್ದುಗಳ ಬಗ್ಗೆ ಮಾತನಾಡ್ತಾರಾ ಅನ್ನೋದರ ಬಗ್ಗೆ ಕುತೂಹಲ ಮೂಡಿದೆ.
ಅಮೆಜಾನ್ ಕಾಡಿನಲ್ಲಿ ನಾಗರಿಕ ಸಮಾಜದ ಸಂಪರ್ಕವೇ ಇಲ್ಲದ ಬುಡಕಟ್ಟು ಸಮುದಾಯ ಪತ್ತೆ; ವೈರಲ್ ವಿಡಿಯೋ ನೋಡಿ