Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ನಟಿ ಕಾರುಣ್ಯ ರಾಮ್ ತನ್ನ ಸ್ವಂತ ತಂಗಿ ಸಮೃದ್ಧಿ ರಾಮ್ ವಿರುದ್ಧ ಸಿಸಿಬಿಯಲ್ಲಿ 25 ಲಕ್ಷ ವಂಚನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಬೆಟ್ಟಿಂಗ್ ಹುಚ್ಚಿನಿಂದ 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಮನೆಯಲ್ಲಿದ್ದ ಚಿನ್ನ, ಹಣವನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾಗಿ ತಂಗಿ ಸಮೃದ್ಧಿ ರಾಮ್ ಜೊತೆ ಪ್ರತಿಭಾ ಶೆಟ್ಟಿ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬುವವರ ವಿರುದ್ಧವು ದೂರು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕಾರುಣ್ಯಾ ರಾಮ್ ತಂಗಿ ಸಮೃದ್ಧಿ ರಾಮ್, ಗ್ಯಾಮ್ಲಿಂಗ್ನಿಂದ ಹಣ ಕಳೆದುಕೊಂಡಿದ್ದು ನಿಜ, ಇದರಿಂದ ನಾನು ಮನೆ ಬಿಟ್ಟು ಹೊರಗೆ ಬರಬೇಕಾಯ್ತು. ಮೂರು ವರ್ಷಗಳಿಂದ ಫ್ಯಾಮಿಲಿಯಿಂದ ದೂರ ಇದ್ದೀನಿ ಅಂತ ಕಣ್ಣೀರಿಟ್ಟಿದ್ದಾರೆ.ʻನನಗೆ ಸಾಲ ಕೊಟ್ಟಿರೋರು ಗೊತ್ತಿರುವ ಸ್ನೇಹಿತರೇ. ಪ್ರತಿಯೊಬ್ಬರೂ ಗೊತ್ತೋ ಗೊತ್ತಿಲ್ಲದೇ ತಪ್ಪು ಮಾಡ್ತಾರೆ, ಅದೇ ರೀತಿ ನನ್ ಲೈಫಲ್ಲೂ ಒಂದು ಮಿಸ್ಟೇಕ್ ಆಗಿದೆ. ಅವರ ಆರೋಪಗಳ ಬಗ್ಗೆ ಮಾತನಾಡಬಾರದು ಅಂತ 3 ವರ್ಷ ಮನೆಯಿಂದ ದೂರ ಇದ್ದೆ. ನಾನು ಯಾವುದರಲ್ಲಿ ಹಣ ಕಳ್ಕೊಂಡಿದ್ದೀನಿ, ಕಳ್ಕೋತಿದ್ದೀನಿ ಅಂತ ಎಲ್ಲರಿಗೂ ಗೊತ್ತಿತ್ತು. 10% – 5% ಬಡ್ಡಿಗೆ ಸಾಲ ಪಡೆದುಕೊಂಡಿದ್ದೆ. ಪ್ರತಿಭಾಗೆ ಇಂಟ್ರೆಸ್ಟ್ ತಪ್ಪದೇ ಕೊಡ್ತಿದ್ದೆ. ಆದ್ರೆ ನಾನು ದುಡ್ಡು ಕೊಡದಿದ್ದರೂ ಪರ್ವಾಗಿಲ್ಲ. ಬೀದಿಗೆ ಬರಬೇಕು ಅನ್ನದಷ್ಟೇ ಅವರ ಉದ್ದೇಶ ಆಗಿತ್ತು ಅಂತ ಕಣ್ಣೀರು ಹಾಕಿದ್ರು.ಪ್ರತಿಭಾ, ಕಪಿಲ್ ಅಂತ ಯಾರ್ಯಾರಿದ್ದಾರೆ ಅವರಿಗೆ ನಾನು ದುಡ್ಡು ಕೊಡೋದು ಬೇಕಾಗಿರಲಿಲ್ಲ. ನನ್ನ ಮತ್ತು ನನ್ನ ಅಕ್ಕನ ಮರ್ಯಾದೆ ತೆಗೆಯೋದ್ರಲ್ಲೇ ಅವರಿಗೆ ಮಜಾ ಇತ್ತು. ಅದಕ್ಕಾಗಿ ಬೇರೆ ಬೇರೆ ಪ್ಲ್ಯಾನ್ ಮಾಡ್ತಿದ್ರು. ಹೇಳಲು ಸಾಧ್ಯವಾಗದಷ್ಟು ಹಲ್ಕಾ ಭಾಷೆಯಲ್ಲಿ ಮೆಸೇಜ್ ಮಾಡ್ತಿದ್ರು. ನಾನು ರಿಪ್ಲೇ ಮಾಡುವಷ್ಟರಲ್ಲಿ ಬ್ಲಾಕ್ ಮಾಡಿಕೊಳ್ತಿದ್ರು, ಅದೆಲ್ಲವೂ ನನ್ನ ಬಳಿ ಇದೆ, ತೆಗೆದುಕೊಂಡು ಬರ್ತೀನಿ ಎಂದರು.https://www.newsics.com/2026/01/16/gauri-lankesh-murder-accused-srikanth-pangark-wins/