Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು : ಕನ್ನಡದಲ್ಲಿ ಮಾತನಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ l ಹಾಸ್ಟೆಲ್ ವಾರ್ಡನ್ ಧಮ್ಕಿ ಹಾಕಿರುವ ಘಟನೆ ನಡೆದಿದೆ.
ಬೆಂಗಳೂರಿನ ಬನ್ನೇರುಘಟ್ಡ ರಸ್ತೆಯ ಕಲ್ಕೆರೆ ಬಳಿ ಇರುವ ಎ ಎಂಸಿ ಕಾಲೇಜಿನ ಹಾಸ್ಟೆಲ್ ವಾರ್ಡನ್ ಸುರೇಶ್ ಬಂಧಿತ ಆರೋಪಿಯಾಗಿದ್ದಾನೆ.
ಕನ್ನಡ ಬೇಡ ಹಿಂದಿಯಲ್ಲಿ ಮಾತನಾಡು. ಕನ್ನಡದಲ್ಲಿ ಮಾತನಾಡಬೇಕಾದರೆ ನೀನು ಮನೆಗೆ ಹೋಗಿ ಮಾತನಾಡು. ನಿನ್ ಜೊತೆ ಕನ್ನಡದಲ್ಲಿ ಮಾತನಾಡಬೇಕಾ..? ಹಿಂದಿಯಲ್ಲಿ ಮಾತನಾಡಬೇಕಾ ಎಂದು ನಾನು ನಿರ್ಧರಿಸುತ್ತೇನೆ..? ಎಂದು ಅವಾಜ್ ಹಾಕಿದ್ದನು.
ಕನ್ನಡ ಮಾತನಾಡಬಾರದು ಎಂದ ಎಎಂಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ಈತ ಧಮ್ಕಿ ಹಾಕಿದ್ದನು. ನಂತರ ಹಾಸ್ಟೆಲ್ ವಾರ್ಡನ್ ಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಮೂಲತಹ ಕೇರಳದನಾಗಿದ್ದು,ಎಎಂಸಿ ಹಾಸ್ಟೆಲ್ ನಲ್ಲಿ ವಾರ್ಡನ್ ಆಗಿದ್ದನು. ಭಾರಿ ಪ್ರತಿಭಟನೆ ಬಳಿಕ ಸುರೇಶ್ ನನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
https://www.newsics.com/2026/01/05/gold-price-increases-by-%e2%82%b91580-in-a-single-day-today/