Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು : ಮಗಳಿಗಾಗಿ ಪತ್ನಿ, ನಟಿ ಚೈತ್ರಾರಾಮ್ ಅವರನ್ನ ನಿರ್ಮಾಪಕ ಹರ್ಷವರ್ಧನ್ ಕಿಡ್ನ್ಯಾಪ್ ಮಾಡಿದ ಘಟನೆ ನಡೆದಿದ್ದು, ನಂತರ ಪ್ರಕರಣ ಸುಖಾಂತ್ಯಗೊಂಡಿದೆ.
ಮಗಳಿಗಾಗಿ ತನ್ನ ಹೆಂಡತಿಯನ್ನೇ ಪತಿ ಅಪಹರಣ ಮಾಡಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಹೇಳಿ ಪತ್ನಿಯನ್ನ ಅಪಹರಣ ಮಾಡಿದ್ದಾರೆ.
ನಟಿ ಚೈತ್ರಾ ಮತ್ತು ನಿರ್ಮಾಪಕ ಹರ್ಷವರ್ಧನ್ ಮದುವೆ ಆಗಿದ್ದರು. ಆದರೆ ಕೌಟುಂಬಿಕ ಕಲಹದಿಂದ ಬೇರೆ ಆಗಿದ್ದರು ಎನ್ನಲಾಗಿದೆ. 1 ವರ್ಷದ ಮಗಳ ಜೊತೆಗೆ ನಟಿ ಚೈತ್ರಾ ಬೆಂಗಳೂರಿಗೆ ಬಂದಿದ್ದರು. ಚೈತ್ರಾಳನ್ನ ಕಿಡ್ನ್ಯಾಪ್ ಮಾಡಿ ಮಗಳನ್ನು ನೀಡುವಂತೆ ಹರ್ಷವರ್ಧನ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚೈತ್ರಾ ಸಹೋದರಿ ದೂರು ನೀಡಿದ್ದಾರೆ.ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ದಂಪತಿಗಳು ನಾವೇ ಇದನ್ನ ಬಗೆಹರಿಸಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.