Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪಲಾಶ್ ಮುಚ್ಚಾಲ್ ಬಗ್ಗೆ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳಲು ಆರಂಭಿಸಿದೆ. ಪಲಾಶ್ ಮುಚ್ಚಾಲ್, ಸ್ಮೃತಿಗೆ ಮೋಸ ಮಾಡಿದ್ದು ರೆಡ್ಹ್ಯಾಂಡ್ ಆಗಿ ಗೊತ್ತಾಗಿದ್ದರಿಂದ ಮದುವೆಯ ದಿನವೇ ಈ ನಿರ್ಧಾರಕ್ಕೆ ಬರಲು ಕಾರಣವಾಗಿದೆ. ಇನ್ನು ಹೊಸ ರೂಮರ್ಗಳ ಪ್ರಕಾರ, ಮದುವೆಯ ಹಿಂದಿನ ದಿನ ಪಲಾಶ್ ಮುಚ್ಚಾಲ್ ಚಕ್ಕಂದವನ್ನು ರೆಡ್ಹ್ಯಾಂಡ್ ಆಗಿ ಕಂಡು ಹಿಡಿದಿದ್ದು, ಸ್ಮೃತಿ ಮಂಧನಾ ಅವರ ಗೆಳತಿ ಹಾಗೂ ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಎನ್ನಲಾಗಿದೆ.
ರೆಡ್ಡಿಟ್ನಲ್ಲಿ ಅದರ ವಿವರಗಳನ್ನು ಕೂಡ ಒಬ್ಬರು ಹಂಚಿಕೊಂಡಿದ್ದಾರೆ ಅದರ ವಿವರ ಇಲ್ಲಿದೆ
ನನ್ನ ಮಾಜಿ ಸಿಚುಯೇಶನ್ಶಿಪ್ ಜನಪ್ರಿಯ ಪಿಆರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸ್ಮೃತಿ ಕುರಿತಾಗಿ ಇದ್ದ ರೂಮರ್ಗಳ ವಿಚಾರವಾಗಿ ನಾನು ಆತನನ್ನು ಸಂಪರ್ಕ ಮಾಡಿದ್ದೆ. ಹಾಗಂತ ನಾನು ಇಲ್ಲಿ ಹೇಳುತ್ತಿರುವುದು ಯಾವುದೇ ಕಲ್ಪನೆಯ ಕಥೆಯಲ್ಲ. ಅವರು ತಮ್ಮ ಕೆಲಸದ ವಾಟ್ಸಾಪ್ ಗ್ರೂಪ್ನಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದರು. ಹಾಗೂ ಈ ಚಾಟ್ಗಳನ್ನು ಅವರು ನನಗೆ ತೋರಿಸಿದರು ಎಂದು ಬರೆದುಕೊಂಡಿದ್ದಾರೆ.
ವಿಚಾರ ಏನೆಂದರೆ, ಪಲಾಶ್ ನಿಜವಾಗಿಯೂ ಸ್ಮೃತಿಗೆ ಮೋಸ ಮಾಡಿದ್ದಾನೆ. ಈಗ ತಾನು ಆಸ್ಪತ್ರೆಗೆ ಅಡ್ಮಿಟ್ ಆಗಿರುವ ಸುದ್ದಿಗಳನ್ನು ನಿರ್ವಹಿಸಲು ಪಿಆರ್ ಸಂಸ್ಥೆಗಳಿಗೆ ಹಣ ನೀಡುತ್ತಿದ್ದಾನೆ. ಆಸ್ಪತ್ರೆಯ ಭೇಟಿಯ ಸುದ್ದಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ತಾನು ಮಾಡಿದ ಅನಾಚಾರವನ್ನು ವೈಟ್ವಾಶ್ ಮಾಡಲು ಸಹ ಮೀಮ್ ಪೇಜ್ಗಳಿಗೆ ಹಣ ನೀಡುತ್ತಿದ್ದಾರೆ. ಆದರೆ, ಯಾವುದು ಈಗ ಕೆಲಸ ಮಾಡುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದೆಲ್ಲದಕ್ಕೂ ಮೂಲ ಕಾರಣ ನಂದಿಕಾ ದ್ವಿವೇದಿ ಅನ್ನೋ ಹುಡುಗಿ. ಮದುವೆಯ ದಿನ ಆತನ ಪಕ್ಕದಲ್ಲೇ ನಿಂತಿದ್ದ ಹುಡುಗಿ ಈಕೆ. ಪಲಾಶ್ಗೆ ನೃತ್ಯ ಸಂಯೋಜನೆ ಟ್ರೇನಿಂಗ್ ನೀಡಲು ಬಾಸ್ಕೋ ತಂಡವು ಈಕೆಯನ್ನು ನಿಯೋಜನೆ ಮಾಡಿದ್ದರೆ, ಗುಲ್ನಾಜ್ ಅನ್ನೋ ಹುಡುಗಿ ಸ್ಮೃತಿ ಜೊತೆ ಕೆಲಸ ಮಾಡುತ್ತಿದ್ದರು. ಸ್ಮೃತಿಯ ಆಪ್ತ ಸ್ನೇಹಿತೆ ಮತ್ತು ಅಟಗಾರ್ತಿ ಶ್ರೇಯಂಕಾ ಪಾಟೀಲ್, ಪಲಾಶ್ ಮತ್ತು ಹುಡುಗಿಯನ್ನು ಫುಲ್ ಬ್ಯಾಂಗ್ ಬ್ಯಾಂಗ್ ಇರುವ ಮೋಡ್ನಲ್ಲಿ ಪತ್ತೆ ಮಾಡಿದರು. ಬಳಿಕ ಸ್ಮೃತಿ ಎದರಲ್ಲೂ ಇಬ್ಬರೂ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇದರ ಬೆನ್ನಲ್ಲಿಯೇ ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಸ್ಮೃತಿಯ ಸಹೋದರ ಪಲಾಶ್ ಮೇಲೆ ಹಲ್ಲೆ ನಡೆಸಿದ್ದರಿಂದ ಅವರಿಗೆ ಸ್ವಲ್ಪ ಗಾಯವಾಯಿತು. ನಂತರ ಅವರ ತಂದೆಗೆ ಎದೆ ನೋವು ಕಾಣಿಸಿಕೊಂಡಿತು ಮತ್ತು ಹೃದಯಾಘಾತದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದೆಲ್ಲಾ ನಡೆಯುವ ವೇಳೆಗೆ ಹೆಚ್ಚಿನ ಗೆಸ್ಟ್ಗಳು ನಿದ್ರೆಗೆ ಜಾರಿದ್ದರು. ಬೆಳಗ್ಗೆಯ ವೇಳೆಗೆ ಅತಿಥಿಗಳಿಗೆ ಸ್ಮೃತಿಯ ತಂದೆಯ ಅನಾರೋಗ್ಯದ ಕಾರಣಕ್ಕೆ ಮದುವೆ ರದ್ದಾಗಿದೆ ಎಂದು ತಿಳಿಸಲಾಗಿತ್ತು. ಅದರೆ, ಸ್ಮೃತಿ ಮಾತ್ರ ಈ ಹಂತದಲ್ಲಿ ಹುಚ್ಚಿಯಂತೆ ಗೋಳಾಡುತ್ತಾ ಅಳುತ್ತಿದ್ದರು.
ಎಲ್ಲದಕ್ಕೂ ಕಾರಣರಾದ ಆ ನೃತ್ಯ ನಿರ್ದೇಶಕಿ ಸ್ಥಳದಿಂದ ಶೀಘ್ರವೇ ತಪ್ಪಿಸಿಕೊಂಡಿದ್ದರೆ, ಪಾಲಕ್ ಮುಚ್ಚಾಲ್ ಕೂಡ ಪಲಾಶ್ರನ್ನು ಅವರನ್ನು ಮುಂಬೈಗೆ ಕರೆದುಕೊಂಡು ಹೋದರು. ಆಸಿಡಿಟಿಯಿಂದ ಆಸ್ಪತ್ರೆಗೆ ದಾಖಲಾಗಿರುವುದು ಎಲ್ಲಾ ಡ್ರಾಮಾ ಅಷ್ಟೇ.ನಾನು ಈ ಹಂತದಲ್ಲಿ ಸ್ಮೃತಿ ಜೀವನ ತುಂಬಾ ಸಂತೋಷದಿಂದ ಇರಬೇಕು ಎಂದು ಮಾತ್ರವೇ ಬಯಸುತ್ತೇನೆ. ಆ ಹುಡುಗಿಯ ನರಕಯಾತನೆ ಯಾರಿಗೂ ಬೇಡ. ಆದರೆ, ದೇವರಿಗೆ ಧನ್ಯವಾದ ಹೇಳಬೇಕು. ಆಕೆಯ ತಂದೆ ಈಗ ಆರೋಗ್ಯವಾಗಿದ್ದಾರೆ. ಇನ್ನು ಆಕೆಯ ಕ್ರಿಕೆಟ್ ಸ್ನೇಹಿತೆಯರು ಆಕೆಯೊಂದಿಗೆ ಇದ್ದಾರೆ. ಯಾವ ಹಂತದಲ್ಲೂ ಆಕೆಯನ್ನು ಬಿಟ್ಟುಹೋಗಿಲ್ಲ. ಬಂಡೆಯಂತೆ ನಿಂತಿದ್ದಾರೆ.
ಈಗ ನಾನು ಎಷ್ಟು ಹತಾಶನಾಗಿದ್ದೇನೆ ಎನ್ನುವುದನ್ನೂ ಕೂಡ ತಿಳಿಸುತ್ತೇನೆ. ನನ್ನ ಮಾಜಿ ಲವರ್ ಪರಿಸ್ಥಿತಿಯೂ ಇದೇ ಕೂಡ. ಆತ ನನಗೆ ಮೋಸ ಮಾಡಿದ. ಅವನು ಇನ್ನೊಬ್ಬ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ನಾನು ನೋಡಿದೆ. ಅಲ್ಲದೆ, ಈ ಪೋಸ್ಟ್ ಹಾಕಿದ್ದಕ್ಕಾಗಿ ಯಾರಾದರೂ ನನಗೆ ಕಾನೂನು ನೋಟಿಸ್ ಕಳುಹಿಸಬಹುದೇ ಎಂದು ನನಗೆ ಸ್ವಲ್ಪ ಭಯವಾಗಿದೆ. ನಾನು ಇದನ್ನು ಅಳಿಸಬೇಕೇ? ದಯವಿಟ್ಟು ನನಗೆ ತಿಳಿಸಿ.
ಕಾಂಗ್ರೆಸ್ ‘ಸಿಎಂ’ ಕುರ್ಚಿ ಕಿತ್ತಾಟ ವಿಚಾರವಾಗಿ ನಟಿ ರಮ್ಯಾ ಹೇಳಿದ್ದೇನು?