Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿಕ್ಕಬಳ್ಳಾಪುರ: ಪೋಷಕರ ಮಾತು ಕೇಳಿ ಪ್ರೀತಿಸಿ ಮದುವೆಯಾದ ಜೋಡಿ ಶಾಕ್ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಗೋಪಲ್ಲಿಯಲ್ಲಿ ನಡೆದಿದೆ.
ಗೋಪಲ್ಲಿ ಗ್ರಾಮದ ಸುಕನ್ಯಾ (19) ಎಂಬ ಯುವತಿ ತನ್ನದೇ ಸಮುದಾಯದ ನಿತಿನ್ (23) ಎಂಬ ಯುವಕನನ್ನು 2 ವರ್ಷಗಳಿಂದ ಪ್ರೀತಿ ಮಾಡ್ತಿದ್ದಳಂತೆ.
ಪ್ರೀತಿಸಿದವನನ್ನೇ ಕೈವಾರ ಬಳಿಯ ದೇವಸ್ಥಾನದಲ್ಲಿ ಸುಕನ್ಯಾ ಮದುವೆಯಾಗಿದ್ದಳು. ಮದುವೆಯಾದ ಬಳಿಕ ಯುವತಿ ಗಂಡನ ಮನೆಗೆ ಹೋಗಿದ್ದಾಳೆ. ಆದ್ರೆ ಯುವಕ ಪೋಷಕರು ನನ್ನ ಮಗ ನಿನಗೆ ವರಸೆಯಲ್ಲಿ ಅಣ್ಣನಾಗ್ಬೇಕು ಎಂದಿದ್ದು, ನಾವು ಈ ಮದುವೆಯನ್ನ ಒಪ್ಪಲ್ಲ ಎಂದು ನಿರಾಕರಿಸಿದ್ದಾರೆ ಎನ್ನಲಾಗ್ತಿದೆ.
ನಿತಿನ್ ಕುಟುಂಬಸ್ಥರು ಮದುವೆ ನಿರಾಕರಿಸಿದ್ದಕ್ಕೆ ಮನನೊಂದ ಸುಕನ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಸುಕನ್ಯಾಳನ್ನು ತಕ್ಷಣ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.