newsics.com
ಹಾಸನದ ಮೊಸಳೆಹೊಸಹಳ್ಳಿಯಲ್ಲಿ ನಡೆದಿರೋದು ಹೃದಯವಿದ್ರಾವಕ ದುರಂತ. ತಮ್ಮ ಪಾಡಿಗೆ ತಾವು ಗಣೇಶ ಮೆರವಣಿಗೆಯಲ್ಲಿ ಸಂಭ್ರಮಾಚರಣೆ ನಡೆಸ್ತಿದ್ದವರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ದುರಂತ ಅಂದ್ರೆ ಬಲಿಯಾದ ಎಲ್ಲರೂ ಬಾಳಿ ಬದುಕಬೇಕಿದ್ದ ಯುವಕರು.
ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಯೋರ್ವ ಈ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ.ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗವಿಗಂಗಾಪುರ ಗ್ರಾಮದವನಾದ ಮಿಥುನ್ ಬಿನ್ ವಿಜಯ್ (23) ಮೃತ ವಿದ್ಯಾರ್ಥಿ. ಈವರೆಗೆ ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ತಡರಾತ್ರಿ (ಸೆ.11) ಹಾಸ್ಟೆಲ್ನಲ್ಲಿ ಮಿಥುನ್ ಗೆಳೆಯರು ಬರ್ತ್ಡೇ ಆಚರಿಸಿದ್ದರು. ಬಳಿಕ ಶುಕ್ರವಾರ ಸಂಜೆವರೆಗೂ ಮಿಥುನ್ ಸ್ನೇಹಿತರ ಜೊತೆಗಿದ್ದ. ಬಳಿಕ ಮೆರವೆಣಿಗೆಗೆ ತೆರಳಿದ್ದ. ಈ ವೇಳೆ ಮೆರವಣಿಗೆಯಲ್ಲಿ ಟ್ರಕ್ ಹರಿದು ದಾರುಣವಾಗಿ ಸಾವನ್ನಪ್ಪಿದ್ದಾನೆ.