newsics.com
ಚಾಮರಾಜನಗರ: ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನದಿಗೆ ಹಾರಿದ್ದ ಮಾಜಿ ಸೈನಿಕನಿಗೆ ಕೊನೆ ಕ್ಷಣದಲ್ಲಿ ಬದುಕಬೇಕೆಂದು ಆಸೆ ಹುಟ್ಟಿದ್ದು, ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಮಾಜಿ ಸೈನಿಕ ಭೃಂಗೇಶ್ ಸಾಲಬಾಧೆ ತಾಳಲಾರದೆ ಸತ್ತೇಗಾಲ ಬಳಿ ಕಾವೇರಿ ನದಿಗೆ ಹಾರಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಬದುಕಬೇಕೆನಿಸಿ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಮಾಜಿ ಸೈನಿಕ ಭೃಂಗೇಶ್ ಮರದ ಕೊಂಬೆಯನ್ನು ಹಿಡಿದುಕೊಂಡಿದ್ದಾರೆ.
ಬಳಿಕ ಮಾಜಿ ಸೈನಿಕ ಭೃಂಗೇಶ್ ರಕ್ಷಿಸುವಂತೆ ಕೂಗಿದ್ದಾರೆ. ಆಗ, ಅಂಬಿಗರು ಮಾಜಿ ಸೈನಿಕ ಭೃಂಗೇಶ್ರನ್ನು ರಕ್ಷಣೆ ಮಾಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Health Benefits ಮೂಸಂಬಿ ಹಣ್ಣಿನ ಪ್ರಯೋಜನಗಳು ಗೊತ್ತಾದ್ರೆ, ದಿನಾ ತಿನ್ನುವಿರಿ!
Modi and Shubhanshu ಪ್ರಧಾನಿ ಭೇಟಿಯಾದ ಶುಭಾಂಶು ಶುಕ್ಲಾ, ಬಾಹ್ಯಾಕಾಶ ಯಾತ್ರೆ ಕೇಳಿ ಮೋದಿ ರೋಮಾಂಚನ, ವಿಡಿಯೋ ನೋಡಿ