newsics.com
ಮಹಿಳೆಯೊಬ್ಬರ ದೇಹವನ್ನು ತುಂಡು-ತುಂಡಾಗಿ ಕತ್ತರಿಸಿ ಬಿಸಾಡಿದ ಭೀಕರ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೊಲಾಲ ಗ್ರಾಮದ ಬಳಿಯ ರಸ್ತೆಯಲ್ಲಿ ನಡೆದಿದೆ.
ಈ ಘಟನೆಯು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಅವರ ಕ್ಷೇತ್ರದಲ್ಲೇ ನಡೆದಿರುವುದು ಪೊಲೀಸ್ ಇಲಾಖೆ ತೀವ್ರ ತನಿಖೆ ನಡೆಸಿದೆ.
ಕೊಲಾಲ ಗ್ರಾಮದ ಬಳಿಯ ರಸ್ತೆಯಲ್ಲಿ ಏಳು ಪ್ಲಾಸ್ಟಿಕ್ ಕವರ್ಗಳಲ್ಲಿ ಮಹಿಳೆಯೊಬ್ಬರ ತುಂಡಾಗಿರುವ ದೇಹದ ಭಾಗಗಳು ಪತ್ತೆಯಾದವು. ಕೈಗಳ ಮೇಲಿನ ಹಚ್ಚೆ ಮತ್ತು ಮುಖದ ಗುರುತುಗಳ ಆಧಾರದ ಮೇಲೆ ಶವವನ್ನು ಲಕ್ಷ್ಮೀದೇವಮ್ಮ ಎಂಬುದು ತಿಳಿದು ಬಂದಿದೆ.
ಆಗಸ್ಟ್ 3, 2025 ರಂದು ಲಕ್ಷ್ಮೀದೇವಮ್ಮ ತಮ್ಮ ಮಗಳನ್ನು ಭೇಟಿಯಾಗಲು ಊರ್ಡಿಗೆರೆಗೆ ತೆರಳಿದ್ದರು. ಆದರೆ, ರಾತ್ರಿಯಾದರೂ ಅವರು ಮನೆಗೆ ವಾಪಸ್ಸಾಗಿರಲಿಲ್ಲ. ಈ ಕುರಿತು ಆಗಸ್ಟ್ 4 ರಂದು ಅವರ ಪತಿ ಬಸವರಾಜು ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆಗಸ್ಟ್ 7 ರಂದು, ಕೊರಟಗೆರೆ-ಕೊಲಾಲ ರಸ್ತೆಯ ಬಳಿ ಒಬ್ಬ ವ್ಯಕ್ತಿಯೊಬ್ಬರು ಕಾಡು ನಾಯಿಯೊಂದು ಮಾನವ ತೋಳನ್ನು ಬಾಯಿಯಲ್ಲಿ ಹಿಡಿದಿರುವುದನ್ನು ನೋಡಿದ್ದಾರೆ.