newsics.com
ರಕ್ಷಾ ಬಂಧನ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ಈ ದಿನ ಸಹೋದರಿಯರು, ತಮ್ಮ ಸಹೋದರರ ಆಯಸ್ಸು, ಪ್ರಗತಿಗಾಗಿ ಪ್ರಾರ್ಥನೆಯನ್ನು ಮಾಡುವ ಮೂಲಕ ರಾಖಿಯನ್ನು ಕಟ್ಟುತ್ತಾರೆ ಮತ್ತು ಸಹೋದರರು ತಮ್ಮ ಸಹೋದರಿಯರ ರಕ್ಷಣೆಗಾಗಿ ಮಾತು ನೀಡುತ್ತಾರೆ.
ಅಣ್ಣ ತಂಗಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 9ರಂದು ರಕ್ಷಾ ಬಂಧನ ಹಬ್ಬವಿದೆ. ಪ್ರತಿ ವರ್ಷ ಈ ಹಬ್ಬದಂದು ಸಹೋದರಿ ತನ್ನ ಸಹೋದರನಿಗೆ ರಾಖಿಯನ್ನು ಕಟ್ಟುತ್ತಾಳೆ.
ಅಂದಹಾಗೆ ಈ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಪ್ರಾರ್ಥನೆ ಮಾಡುತ್ತಾರೆ. ಈ ದಿನ ಸಹೋದರನ ಕೈಗೆ ಕಟ್ಟುವ ದಾರದ ಬಣ್ಣವೂ ಕೂಡ ಸಹೋದರನ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ರಾಖಿ ಬಣ್ಣದ ಮೇಲೆ ಸಹೋದರಿಯರು ಗಮನ ಹರಿಸಬೇಕು.
ಸಾಮಾನ್ಯವಾಗಿ ಎಲ್ಲರೂ ಸಹ ಬಣ್ಣ ಬಣ್ಣದ ಆಕಷ್ಟಕವಾಗಿ ಕಾಣುವ ಹೊಸ ಡಿಸೈನ್ ಹೊಂದಿರುವ ರಾಖಿಗಳನ್ನು ಕಟ್ಟಲು ಇಷ್ಡುತ್ತಾರೆ. ಆದರೆ ನೀವು ರಾಖಿ ಕಟ್ಟುವ ಮುನ್ನ ಎಂದಿಗೂ ಕಪ್ಪು ಬಣ್ಣದ ರಾಖಿಯನ್ನು ಕಟ್ಟಬೇಡಿ. ಏಕೆಂದರೆ ಧರ್ಮ ಗ್ರಂಥಗಳಲ್ಲಿ ಕಪ್ಪು ಬಣ್ಣದವನ್ನು ಅಶುಭವೆಂದು ಹೇಳಲಾಗುತ್ತದೆ. ಹೀಗಾಗಿ ನಿಮ್ಮ ಪ್ರೀತಿಯ ಸಹೋಧರನಿಗೆ ಕಪ್ಪು ಬಣ್ಣದ ರಾಖಿ ಕಟ್ಟಬೇಡಿ.
ಪ್ರಮುಖವಾಗಿ ರಕ್ಷಾ ಬಂಧನದ ಸಾರವೇ ರಕ್ಷೆಯನ್ನು ನೀಡುವುದು ಎಂದಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನೀವು ಮುರಿದ ರಾಖಿ ಅಥವಾ ಹರಿದ ರಾಖಿಯನ್ನು ಕಟ್ಟಬೇಡಿ. ಈ ರೀತಿ ಮುರಿದ ರಾಖಿ ಕಟ್ಟುವುದು ಅಶುಭವೆಂದು ಪರಿಗಣಿಸಲಾಗಿದ್ದು, ಇದರಿಂದ ನಿಮ್ಮ ಪ್ರೀತಿಯ ಸಹೋದರನಿಗೆ ಸಮಸ್ಯೆ ಸಹ ಉಂಟಾಗಬಹುದು ಎನ್ನಲಾಗುತ್ತದೆm
ಕೆಲವರು ದೇವರ ಚಿತ್ರಗಳಿರುವ ರಾಖಿಯನ್ನು ಅಣ್ಣ-ತಮ್ಮನಿಗೆ ಕಟ್ಟುತ್ತಾರೆ. ಆದರೆ ಈ ರೀತಿ ರಾಖಿ ಕಟ್ಟಬೇಡಿ ಎನ್ನಲಾಗುತ್ತದೆ. ಏಕೆಂದರೆ ಇದು ಕಟ್ಟುವುದು ಒಳ್ಳೆಯದೇ ಆದರೂ ಸಹ ಕಲೆ ದಿನಗಳಲ್ಲಿ ಅದು ಬಿಚ್ಚಿ ಎಲ್ಲಾದರೂ ಎಸೆಯಬಹುದು ಅಥವಾ ಕಟ್ಟಾಗಿ ಎಲ್ಲಿಯಾದರೂ ಬೀಳಬಹುದು. ಹೀಗಾಗಿ ದೇವರ ಚಿತ್ರವಿರುವ ರಾಖಿಯನ್ನು ಆದಷ್ಟು ಕಟ್ಟಬೇಡಿ. ಒಂದು ವೇಳೆ ಕಟ್ಟಿದರೂ ಅದನ್ನು ಸರಿಯಾಗಿ ನೋಡಿಕೊಳ್ಳುವಂತೆ ಹೇಳಿ.