newsics.com
ಉತ್ತರ ಪ್ರದೇಶ: ಮದುವೆ ಮನೆಯ ಊಟದಲ್ಲಿ ಮೀನು ಇಲ್ಲ ಎಂದು ವರನ ಕಡೆಯವರು ವಧುವಿನ ಮನೆಯವರ ಮೇಲೆ ಹಲ್ಲೆ ನಡೆಸಿದ್ದರಿಂದ 6 ಮಂದಿ ಗಾಯಗೊಂಡಿದ್ದಾರೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವರನನ್ನು ಅಭಿಷೇಕ್ ಶರ್ಮಾ ಎಂದು ಗುರುತಿಸಲಾಗಿದೆ, ಸುಷ್ಮಾ ಎಂಬುವರನ್ನು ಮದುವೆಯಾಗಲು ಡಿಯೋರಿಯಾದ ಆನಂದ್ ನಗರಕ್ಕೆ ಬಂದಿದ್ದರು.
ವರಮಾಲೆ ಬಳಿಕ ವರನ ಕಡೆಯವರಿಗೆ ಊಟಕ್ಕೆ ಸಿದ್ಧತೆ ಮಾಡಲಾಗಿತ್ತು, ಪನೀರ್, ಪಲಾವ್ ಸೇರಿದಂತೆ ಸಸ್ಯಾಹಾರಿ ಭಕ್ಷ್ಯಗಳಿದ್ದವು. ಆದರೆ ಮಾಂಸಾಹಾರ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಬಳಿಕ ಗಲಾಟೆ ಮಿತಿ ಮೀರಿ ವರನ ಕಡೆಯವರು ವಧುವಿನ ಕಡೆಯವರಿಗೆ ಥಳಿಸಿದ್ದಾರೆ. ವಧುವಿನ ಮೇಲೂ ಹಲ್ಲೆ ನಡೆಸಲಾಗಿದೆ.
ಹುಡುಗನ ತಂದೆ, ವರ ಮತ್ತು ಅವನ ಕೆಲವು ಸಹಚರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕೆಲವರನ್ನು ಬಂಧಿಸಲಾಗಿದೆ. ಈ ಇಡೀ ವಿವಾದವು ಕ್ಷುಲ್ಲಕ ವಿಷಯಕ್ಕೆ ಪ್ರಾರಂಭವಾಗಿತ್ತು. ಊಟಕ್ಕೆ ಏನಿದೆ ಎಂದು ವರ ಕೇಳಿದ್ದಾನೆ. ಬಳಿಕ ಮೆನು ಬಗ್ಗೆ ಕೇಳಿ ಬಳಿಕ ಮಾಂಸಾಹಾರವಿಲ್ಲ ಎಂದು ಗಲಾಟೆ ಮಾಡಿದ್ದಾನೆ ಎಂದು ವಧುವಿನ ತಾಯಿ ಮೀರಾ ಶರ್ಮಾ ತಿಳಿಸಿದ್ದಾರೆ. ವರ ವಧುವಿನ ತಂದೆ-ತಾಯಿಗೆ ಕಪಾಳಮೋಕ್ಷವನ್ನೂ ಮಾಡಿದ್ದಾನೆ ಎಂದೂ ದೂರಲಾಗಿದೆ.
ಪೊಲೀಸರು ಬರುವ ಮುನ್ನವೇ ವರ ಸೇರಿದಂತೆ ಹಲವರು ಮದುವೆಯ ಸ್ಥಳದಿಂದ ತೆರಳಿದ್ದರು. ಮದ್ಯದ ಅಮಲಿನಲ್ಲಿ ವರ ಊಟದ ವಿಚಾರದಲ್ಲಿ ಜಗಳವಾಡಿದ್ದಾನೆ ಎಂದು ಪೊಲೀಸ್ ಠಾಣೆ ಪ್ರಭಾರಿ ರಾಜೇಶ್ ಪಾಂಡೆ ತಿಳಿಸಿದ್ದಾರೆ.
ವಧುವಿನ ತಂದೆ ದಿನೇಶ್ ಶರ್ಮಾ ಅವರ ದೂರಿನ ಆಧಾರದ ಮೇಲೆ ವರ ಅಭಿಷೇಕ್ ಶರ್ಮಾ, ಸುರೇಂದ್ರ ಶರ್ಮಾ, ರಾಮ್ ಪ್ರವೇಶ್ ಶರ್ಮಾ, ರಾಜ್ಕುಮಾರ್ ಮತ್ತು ಕೆಲವು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಭಾರತದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ಗೆ ರಕ್ತ ಕ್ಯಾನ್ಸರ್: ಚಿಕಿತ್ಸೆಗಾಗಿ ಬಿಸಿಸಿಐನಿಂದ ಕೋಟಿ ರೂ. ನೆರವು