Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health- Cancer risk from rice | ಹವಾಮಾನ ಬದಲಾವಣೆ ಎಫೆಕ್ಟ್: ಅಕ್ಕಿಯಿಂದ ಕ್ಯಾನ್ಸರ್ ಅಪಾಯ ಹೆಚ್ಚಳ, ವಿಜ್ಞಾನಿಗಳ ಎಚ್ಚರಿಕೆ
ಆರೋಗ್ಯಕರ್ನಾಟಕಕೃಷಿದೇಶಪ್ರಮುಖ

Health- Cancer risk from rice | ಹವಾಮಾನ ಬದಲಾವಣೆ ಎಫೆಕ್ಟ್: ಅಕ್ಕಿಯಿಂದ ಕ್ಯಾನ್ಸರ್ ಅಪಾಯ ಹೆಚ್ಚಳ, ವಿಜ್ಞಾನಿಗಳ ಎಚ್ಚರಿಕೆ

Share
1 Min Read
SHARE

newsics.com

2050ರ ವೇಳೆಗೆ, ಏಷ್ಯಾ ಖಂಡದ ಅನೇಕ ದೇಶಗಳಲ್ಲಿ ಸೇವಿಸುವ ಪ್ರಮುಖ ಆಹಾರವಾದ ಅಕ್ಕಿಯಿಂದಾಗಿ ಕ್ಯಾನ್ಸರ್ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ.

ಭಾರತ, ಚೀನಾ, ಬಾಂಗ್ಲಾದೇಶ, ನೇಪಾಳ, ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌’ನಂತಹ ದೇಶಗಳಲ್ಲಿ ಈ‌ ಅಪಾಯ ಹೆಚ್ಚಲಿದೆ ಎಂದು ಅಧ್ಯಯನ ವರದಿ ಹೇಳಿದೆ.

ಗ್ಲೋಬಲ್ ಮೆಡಿಕಲ್ ಜರ್ನಲ್‌’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹವಾಮಾನ ಬದಲಾವಣೆಯಿಂದಾಗಿ ಮಣ್ಣಿನಲ್ಲಿರುವ ಅಂಶಗಳು ಬದಲಾಗುತ್ತಿವೆ. ಆರ್ಸೆನಿಕ್ ಎಂಬ ವಿಷಕಾರಿ ವಸ್ತುವಿನ ಮಟ್ಟ ಹೆಚ್ಚುತ್ತಿದೆ.

ಈ ಆರ್ಸೆನಿಕ್ ಸುಲಭವಾಗಿ ಅಕ್ಕಿಯನ್ನು ಪ್ರವೇಶಿಸಬಹುದು. ಮಣ್ಣಿನಲ್ಲಿರುವ ಆರ್ಸೆನಿಕ್ ಮತ್ತು ನೀರಾವರಿ ನೀರಿನಲ್ಲಿ ಇರುವ ಆರ್ಸೆನಿಕ್ ಕಾರಣದಿಂದಾಗಿ ಇದು ಅಕ್ಕಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಅಡುಗೆ ಮಾಡುವಾಗ ಬಳಸುವ ನೀರಿನಲ್ಲಿ ಆರ್ಸೆನಿಕ್ ಇದ್ದರೆ ಅದು ಅಕ್ಕಿಯನ್ನೂ ಪ್ರವೇಶಿಸಬಹುದು.

ಈ ಸಂಶೋಧನೆಯನ್ನು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ್ದಾರೆ.

ನಮ್ಮ ದೇಹದಲ್ಲಿ ಆರ್ಸೆನಿಕ್ ಅಂಶ ಹೆಚ್ಚಾದರೆ ಶ್ವಾಸಕೋಶ, ಮೂತ್ರಕೋಶ ಮತ್ತು ಚರ್ಮದಂತಹ ಅಂಗಗಳಲ್ಲಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಹೃದಯ ಕಾಯಿಲೆ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಸಮಸ್ಯೆಯನ್ನ ಪರಿಹರಿಸಲು, ಮೊದಲು ಮಣ್ಣಿನ ನೀರಿನ ಗುಣಮಟ್ಟದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ. ಭತ್ತದ ಕೃಷಿ ಪದ್ಧತಿಗಳಲ್ಲಿಯೂ ಬದಲಾವಣೆಗಳನ್ನು ಮಾಡಬೇಕು. ವಿವಿಧ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಶುದ್ಧೀಕರಣ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ನಿಯಂತ್ರಿಸಬಹುದು.

ಮಳೆ ನೀರಿನ ಬಳಕೆ, ವಸ್ತುಗಳ ಶುದ್ಧೀಕರಣ ಮತ್ತು ಆರೋಗ್ಯಕರ ಅಡುಗೆ ನೀರಿನ ಬಳಕೆಯಂತಹ ವಿಷಯಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು.

ಬದಲಾಗುತ್ತಿರುವ ಹವಾಮಾನವು ಅಕ್ಕಿಯ ಮೇಲೆ ಬೀರುವ ಪರಿಣಾಮವು ನಮ್ಮ ಆರೋಗ್ಯವನ್ನು ಪ್ರಶ್ನಿಸುತ್ತಿದೆ. ಆದ್ದರಿಂದ, ಭವಿಷ್ಯದ ಮೇಲೆ ಕಣ್ಣಿಟ್ಟು ಅಕ್ಕಿಯ ಕೃಷಿ, ಸಂಸ್ಕರಣೆ ಮತ್ತು ಬಳಕೆಯಲ್ಲಿ ಬದಲಾವಣೆಗಳನ್ನು ತರುವುದು ಬಹಳ ಮುಖ್ಯ ಎಂದು ಅಧ್ಯಯನ ಹೇಳಿದೆ.

Heart attacks risk increasing in children ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ ಸಾಧ್ಯತೆ: ವರದಿ ನೋಡಿ ಅಧ್ಯಯನ ತಂಡವೇ ಶಾಕ್

Illegal imprisonment ಪತ್ನಿ ಬದುಕಿದ್ದರೂ ಕೊಲೆ ಪಟ್ಟ: 2 ವರ್ಷ ಅಕ್ರಮ ಜೈಲು ವಾಸ, 5 ಕೋಟಿ ಪರಿಹಾರ ಕೋರಿ ಹೈಕೋರ್ಟ್‌ಗೆ ಮೊರೆ

TAGGED:Climate change effect: Cancer risk from ricescientists warn
Share This Article
Facebook Twitter Copy Link Print
Previous Article Illegal imprisonment ಪತ್ನಿ ಬದುಕಿದ್ದರೂ ಕೊಲೆ ಪಟ್ಟ: 2 ವರ್ಷ ಅಕ್ರಮ ಜೈಲು ವಾಸ, 5 ಕೋಟಿ ಪರಿಹಾರ ಕೋರಿ ಹೈಕೋರ್ಟ್‌ಗೆ ಮೊರೆ
Next Article KRS Dam ಕೆಆರ್‌ಎಸ್‌ನಿಂದ ನದಿಗೆ 55 ಸಾವಿರ ಕ್ಯುಸೆಕ್ ನೀರು ಬಿಡುಗಡೆ, ನದಿತೀರದ ಜನರಿಗೆ‌ ಮತ್ತೆ ಎಚ್ಚರಿಕೆ

Popular Posts

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

2 Min Read

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read

ಪ್ರಮಾಣ ವಚನ ಬಳಿಕ ಪರಮೇಶ್ವರ್, ಎಂಬಿ ಪಾಟೀಲ್ ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

1 Min Read

You Might Also Like

ಪ್ರಮುಖ

ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ

1 Min Read
ದೇಶಪ್ರಮುಖ

ಬಿಹಾರದ ಮುಜಾಫರ್ ಪುರ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 10 ರೋಗಿಗಳು ಸಜೀವ ದಹನ.!

1 Min Read
ಕರ್ನಾಟಕಪ್ರಮುಖ

ಬರ್ತಡೇಯಂದು ಕೇಕ್ ಕಟ್‌ ಮಾಡಿಸಿ, ಪತ್ನಿಯನ್ನೇ ಕತ್ತರಿಸಿದ ಪಾಪಿ ಪತಿ

2 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?