newsics.com
ಮಂಗಳೂರಿನ ಬೊಕ್ಕಪಟ್ಣದ ನದಿ ದಂಡೆಯಲ್ಲಿ ಜಯ ನಾರಾಯಣ ಪೂಜಾರಿ ಅವರ ಕಾಗೆಗಳ ಮೇಲಿನ ಒಲವು ಎಲ್ಲರ ಗಮನ ಸೆಳೆಯುತ್ತಿದೆ.
ಜಯ ನಾರಾಯಣ ಪೂಜಾರಿ ಎಂಬುವರು ಕಾಗೆಗಳಿಗೆ ಪ್ರೀತಿ ತೋರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಒಂದು ತಟ್ಟೆಯ ಶಬ್ದಕ್ಕೆ ಹಿಂಡುಹಿಂಡು ಕಾಗೆಗಳು ಆಗಮಿಸುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ.
ಮಂಗಳೂರಿನ ಬೊಕ್ಕಪಟ್ಣದ ಅಬ್ಬಕ್ಕ ಕ್ವೀನ್ ಕ್ರೂಸ್ ಹೊಟೇಲ್ನ ಸಿಬ್ಬಂದಿ ಜಯ ನಾರಾಯಣ ಪೂಜಾರಿ, ಕಳೆದ ಐದು ವರ್ಷಗಳಿಂದ ಕಾಗೆಗಳಿಗೆ ಊಟ ಹಾಕುವ ಸಂಪ್ರದಾಯ ರೂಢಿಸಿಕೊಂಡು ಬಂದಿದ್ದಾರೆ.
ನಿತ್ಯ ಮಧ್ಯಾಹ್ನ, ಗ್ರಾಹಕರಿಗೆ ಊಟ ಬಡಿಸುವ ಮೊದಲು, ಜಯ ನಾರಾಯಣ ಅವರು ಒಂದು ತಟ್ಟೆಯಲ್ಲಿ ಅನ್ನವನ್ನು ತುಂಬಿ, ಸ್ವಲ್ಪ ಸಾರು ಸುರಿದು, ಕಾಗೆಗಳಿಗೆ ಇಡುತ್ತಾರೆ.
ತಟ್ಟೆಯ ಶಬ್ದ ಕೇಳಿದ ತಕ್ಷಣ, ಕಾಗೆಗಳು ‘ಕಾವ್… ಕಾವ್…’ ಎಂದು ಕೂಗುತ್ತಾ, ಹಾರಿಕೊಂಡು ಬಂದು ಅನ್ನ ತಿನ್ನುತ್ತವೆ.
ಜಯ ನಾರಾಯಣ ಅವರು ಈ ಕಾರ್ಯವನ್ನು ಇವರು ಯಾವುದೇ ಗುರಿಯಿಲ್ಲದೇ, ಕೇವಲ ಒಲವಿನಿಂದ ಮಾಡುತ್ತಿದ್ದಾರೆ. ಇವರ ಈ ಸರಳ ಕಾರ್ಯವು ಸ್ಥಳೀಯರ ಮನಸ್ಸನ್ನು ಗೆದ್ದಿದೆ.
ನಾನು 5 ವರ್ಷದಿಂದ ಕಾಗೆಗಳಿಗೆ ಊಟ ಇಡುತ್ತಿದ್ದೇನೆ. ಮೊದಲು ಕಾಗೆಗಳು ಬರುತ್ತಿರಲಿಲ್ಲ. ಆದರೆ, ತಟ್ಟೆ ಬಡಿದ ಬಳಿಕ ಒಂದೆರಡು ಕಾಗೆ ಬರಲು ಆರಂಭವಾಯಿತು. ನಂತರ ಕಾಗೆಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಈಗ 150 ರವರೆಗೆ ಕಾಗೆಗಳು ಬಂದು ಅನ್ನ ತಿನ್ನುತ್ತವೆ ಎನ್ನುತ್ತಾರೆ, ಜಯ ನಾರಾಯಣ ಪೂಜಾರಿ.
ಒಡಿಶಾದ ಕಟಕ್ ಜಿಲ್ಲೆಯ ಸಾನಾ ಮುಂಡಳಿ ಅರಣ್ಯದಲ್ಲಿ ಕನ್ಹು ಬೆಹೆರಾ ಎನ್ನುವವರು ನಿತ್ಯ ನವಿಲುಗಳಿಗೆ ಆಹಾರ ಹಾಕುತ್ತಾರೆ. ಇವರ ಒಂದು ಕೂಗಿಗೆ 200ಕ್ಕೂ ಹೆಚ್ಚು ನವಿಲುಗಳು ಓಡಿ ಬರುತ್ತವೆ. 1999ರಲ್ಲಿ ಕನ್ಹು ಬೆಹೆರಾ ಅವರ ತಾತ ನವಿಲುಗಳಿಗೆ ಆಹಾರ ಹಾಕುವುದನ್ನು ಆರಂಭಿಸಿದ್ದರು. ಅವರ ಕಾಲಾನಂತರ, ತಾತನಿಗೆ ಕೊಟ್ಟ ಮಾತಿನಂತೆ ಮೊಮ್ಮಗ ಕನ್ಹು ಬೆಹೆರಾ ಅವರು ರಾಷ್ಟ್ರಪಕ್ಷಿಗೆ ಆಹಾರ ಹಾಕುವುದನ್ನು ಮುಂದುವರಿಸಿದ್ದಾರೆ.
Swamy nithyananda ಸ್ವಾಮಿ ನಿತ್ಯಾನಂದ ನಿಜವಾಗಿಯೂ ಎಲ್ಲಿದ್ದಾರೆ? ಕೋರ್ಟ್ ವಿಚಾರಣೆ ವೇಳೆ ಬಹಿರಂಗ