newsics.com
ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು.ಈ ಘಟನೆಯಲ್ಲಿ ಕೋಲಾರ ಮೂಲದ ಸಹನಾ ಕೂಡ ಮೃತಪಟ್ಟಿದ್ದಾರೆ. ಸದ್ಯ ಅವರ ತಂದೆ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ಪರಿಹಾರ ಬೇಕಿಲ್ಲ, ನಮ್ಮ ಮಗು ಬೇಕಿತ್ತು, ಸರ್ಕಾರದ ಪರಿಹಾರ ನಮಗೆ ಅವಶ್ಯಕತೆ ಇರಲಿಲ್ಲ, ನನ್ನ ಮಗಳೇ ತಿಂಗಳಿಗೆ 1 ಲಕ್ಷ ಸಂಪಾದನೆ ಮಾಡ್ತಿದ್ದಳು. ನಮಗೂ ದೇವರು ಕೊಟ್ಟಿದ್ದಾನೆ, ನಾವು ಶಿಕ್ಷಕ ವೃತ್ತಿ ಮಾಡ್ತಿದ್ದೀವಿ.ಮಕ್ಕಳ ಪ್ರಾಣವನ್ನು ಪರಿಹಾರದ ರೂಪದಲ್ಲಿ ಅಳತೆ ಮಾಡುವುದು ಸರಿಯಲ್ಲ, ಮಗಳನ್ನು ಕಳೆದುಕೊಂಡ ಹಿಂಸೆ ತಾಳಲಾಗುತ್ತಿಲ್ಲ. ಪರಿಹಾರದ ಚೆಕ್ ರಾಜ್ಯ ಸರ್ಕಾರಕ್ಕೆ ವಾಪಾಸ್ ನೀಡೊಣ ಅನ್ನಿಸುತ್ತಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೆ ಈ ಘಟನೆ ಆಗ್ತಿರಲಿಲ್ಲ. ಪಾಸ್ ಸಿಕ್ಕಿದರೆ ಸೆಲೆಬ್ರೇಷನ್ಗೆ ಹೋಗೊದಾಗಿ ಮಗಳು ಹೇಳಿದ್ದಳು. ನಿಗದಿತ ಸಂಖ್ಯೆಯಿಂದ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕಿತ್ತು ಎಂದು ಭಾವುಕರಾದರು.