newsics.com
ಕನಕಪುರ: 8 ವರ್ಷದ ಬಳಿಕ ನಾನು ಮತ್ತೆ ಬರುತ್ತೇನೆ ನನ್ನನ್ನು ಹುಡುಕಬೇಡಿ ಎಂದು ವಿದ್ಯಾರ್ಥಿಯೋರ್ವ ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾನೆ.
ರಾಮನಗರ ಜಿಲ್ಲೆಯ ಕನಕಪುರದ ದಾಳೇಗೌಡ ಅವರ ಮಗ ತೇಜಸ್ (14) ಮನೆ ಬಿಟ್ಟು ಹೋದ ಬಾಲಕ.
ಈತ ಕನಕಪುರದ ಎಸ್ಎನ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ನಾನು ಎಂಟು ವರ್ಷದ ಬಳಿಕ ಮತ್ತೆ ಬರುತ್ತೇನೆ ಎಂದು ಪತ್ರ ಬರೆದಿದ್ದಾನೆ.
ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದ ಬಾಲಕ ಏಕಾಏಕಿ ಪತ್ರದಲ್ಲಿ ನಾನು 8 ವರ್ಷದ ಬಳಿಕ ಮತ್ತೆ ಬರುತ್ತೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಅಕಸ್ಮಾತ್ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನಾನು ಸತ್ತಂತೆ ಎಂದು ಭಾವಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿ ಬಾಲಕ ನಾಪತ್ತೆಯಾಗಿದ್ದಾನೆ. ಈ ಕುರಿತು ಬಾಲಕನ ತಂದೆ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.