newsics.com
ಬೆಂಗಳೂರು:ಒಮ್ಮೆಯಾದರೂ ಕಾಶ್ಮೀರದ ಪರಿಸರವನ್ನು ಕಣ್ತುಂಬಿಕೊಳ್ಳಬೇಕು ಎಂದುಕೊಂಡವರಲ್ಲಿ ಸಾಕಷ್ಟು ಜನರಿದ್ದಾರೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಅಲ್ಲಿಗೆ ತೆರಳುವವವರ ಸಂಖ್ಯೆ ದ್ವಿಗುಣವಾಗುತ್ತಲೇ ಇತ್ತು. ಆದರೆ ಏಪ್ರಿಲ್ 22ರಂದು 26 ಪ್ರವಾಸಿಗರ ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರದತ್ತ ಪ್ರವಾಸಿಗರ ಹೋಗುವವರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದೆ. ಈಗಾಗಲೇ ಪ್ರವಾಸ ಬುಕಿಂಗ್ ಮಾಡಿದವರೆಲ್ಲ ರದ್ದು ಮಾಡುತ್ತಿದ್ದಾರೆ. ಇದೀಗ ಕರ್ನಾಟಕದ ಬೆಂಗಳೂರು ಟು ಕಾಶ್ಮೀರ ವಿಮಾನ ಟಿಕೆಟ್ ಬೆಲೆಯಲ್ಲಿ ಕುಸಿತವಾಗಿದೆ.
ಮೊದಲು ಬೆಂಗಳೂರಿನಿಂದ ಜಮ್ಮು ಅಥವಾ ಕಾಶ್ಮೀರಕ್ಕೆ ತುರ್ತಾಗಿ ಹೋಗಬೇಕು ಎಂದರೆ ವಿಮಾನದ ಟಿಕೆಟ್ ದರ 30 ಸಾವಿರ ರೂ.ಗಳಿಂದ 40 ಸಾವಿರ ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿತ್ತು. ಉಗ್ರರ ದಾಳಿಯಿಂದಾಗಿ ಕಾಶ್ಮೀರಕ್ಕೆ ಹೋಗುವವರ ಪ್ರಮಾಣ ಸಂಪೂರ್ಣವಾಗಿ ಕುಸಿತವಾಗಿದೆ. ಆದ್ದರಿಂದ ಕಾಶ್ಮೀರಕ್ಕೆ ಎಂದಿನಂತೆ ವಿಮಾನದ ಹಾರಾಟ ಇದ್ದರೂ ಪ್ರಯಾಣಿಕರು ಮಾತ್ರ ಬರುತ್ತಿಲ್ಲ. ಆದ್ದರಿಂದ ಎಲ್ಲ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿವೆ. ಕಳೆದ 10 ದಿನಗಳ ಹಿಂದ ಬೆಂಗಳೂರು-ಕಾಶ್ಮೀರ ತುರ್ತು ಟಿಕೆಟ್ ದರ 40 ಸಾವಿರ ರೂ. ಇದ್ದದ್ದು, ಇದೀಗ ಕೇವಲ 8 ರಿಂದ 9 ಸಾವಿರ ರೂ.ಗೆ ಇಳಿಕೆ ಆಗಿದೆ.ಇನ್ನು ಸದ್ಯದಲ್ಲಿ ಕಾಶ್ಮೀರಕ್ಕೆ ತುರ್ತಾಗಿ ಹೋಗಬೇಕು ಎಂದುಕೊಂಡವರು ಕೇವಲ 8 ರಿಂದ 9 ಸಾವಿರ ರೂ.ನಲ್ಲಿ ಹೋಗಬಹುದು.